ಸಿಂಧನೂರು ತಾಲೂಕಿನ ರೌಡಕುಂದ ಸಂಸ್ಥಾನ ಹಿರೇಮಠದ ಶ್ರೀಗಳಾದ ಶ್ರೀ ಮರಿಸಿದ್ದಲಿಂಗ ಶಿವಾಚಾರ್ಯರು ಲಿಂಗೈಕ್ಯೆರಾಗಿದ್ದು ತಾಲ್ಲೂಕಿನ ಭಕ್ತರಿಗೆ ತುಂಬಲಾರದ ನಷ್ಟವಾಗಿದ್ದು.ಅದೆ ರೀತಿ ರಾಜ್ಯದ ಕನ್ನಡ ಪರ ಸಂಘಟನೆಯ ಹೋರಾಟಗಾರರು ಕನ್ನಡ ಚಳುವಳಿಯ ನಾಗೇಶರವರು ಅಗಲಿದ್ದು ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಿಂಧನೂರು ಕನ್ನಡ ಪರ ಸಂಘಟನೆ ಒಕ್ಕೂಟದ ತಾಲ್ಲೂಕ ಸಮಿತಿಯಿಂದ ಗಾಂಧಿ ವೃತ್ತದಲ್ಲಿ ಇಬ್ಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಮಾಡಿ, ಒಂದು ನಿಮಿಷಗಳ ಕಾಲ ಮೌನಾಚರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಬಸವರಾಜ್ ಬಡಿಗೇರ್ , ಗೌರವ ಅಧ್ಯಕ್ಷರಾದ ಮೌನೇಶ ದೊರೆ, ಕಾರ್ಯಧ್ಯಕ್ಷ ವೀರೇಶ ಭಾವಿಮನಿ, ಉಪಾಧ್ಯಕ್ಷ ಸುರೇಶ್ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಬಿಮೇಶ ಕವಿತಾಳ , ಪ್ರಚಾರ ಸಮಿತಿ ಅಧ್ಯಕ್ಷ ಸಂಗಮೇಶ ಹಿರೇಮಠ, ಕಾರ್ಯದರ್ಶಿ ಎಸ್.ಎನ್.ವೀರೇಶ., ಶಿವಪುತ್ರಪ್ಪ ಮಾಸ್ತರ್, ಎಂ.ಡಿ.ಫಾರುಖ್. ಉಪಸ್ಥಿತಿ ಇದ್ದರು
ವರದಿ: ಅವಿನಾಶ ದೇಶಪಾಂಡೆ ✍️