ರೈತ ಮತ್ತು ಸೈನಿಕರಿಂದ ಶ್ರೀ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ನ ನೂತನ ಕಾರ್ಯಾಲಯವನ್ನು ಉದ್ಘಾಟನೆ

0
179

ಸಿಂಧನೂರು ನಗರದ ಸತ್ಯಾಗಾರ್ಡನ್ ರಸ್ತೆಯಲ್ಲಿ ನೂತನವಾಗಿ ಶ್ರೀ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯಾಲಯವನ್ನು ಸಾವಯವ ರೈತ ಚಿದಾನಂದಪ್ಪ ಅಂಗಡಿ, ಹಾಲಿ ಸೈನಿಕರಾದ ಯಂಕೋಬ ಯಾದವ್ ಉದ್ಘಾಟನೆ ಮಾಡಿದರು.

ಇದೇ ಸಮಯದಲ್ಲಿ ಹಟ್ಟಿ ಗ್ರಾಮದ ನೂತನ ದುರ್ಗಾದೇವಿ ದೇವಸ್ಥಾನ ಪ್ರತಿಷ್ಟಾಪನೆ ಕಾರ್ಯಕ್ಕೆ ಟ್ರಸ್ಟ್ ವತಿಯಿಂದ ಅಕ್ಕಿ ಮತ್ತು ಕಿರಾಣಿ ಸಾಮಾನುಗಳನ್ನು ನೀಡಲಾಯಿತು. ಪೂಜಾ ಕಾರ್ಯಕ್ರಮವನ್ನು ನವಲಿ ಭೀಮಾಚಾರ್ಯರು ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ಕೆ ಅತಿಥಿಗಳಾಗಿ ಆಗಮಿಸಿದ ನೇತ್ರ ತಜ್ಞರಾದ ಡಾ.ಚನ್ನನಗೌಡ ಪಾಟೀಲ್ , ನಗರಸಭೆ ನಾಮನಿರ್ದೇಶನ ಸದಸ್ಯ ಪ್ರಶಾಂತ್ ಕಿಲ್ಲೆದ್, ಬಶೀರ್ ಏತ್ಮಾರಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪದ್ಮನಾಯ್ಡು, ಸಾಯಿ ರಾಮಕೃಷ್ಣ, ಕಾರುಣ್ಯ ನೆಲೆ ವೃದ್ಧಾಶ್ರಮದ ಮುಖ್ಯಸ್ಥ ಚನ್ನಬಸಯ್ಯ ಸ್ವಾಮಿ ಹಿರೇಮಠ, ಯುವ ಮುಖಂಡರಾದ ಅಜಯ್ ದಾಸರಿ, ಅವಿನಾಶ ದೇಶಪಾಂಡೆ, ವಿರೇಶ ಮಾಳಿಗಿ, ಹನುಮೇಶ ಜಾಗೀರದಾರ, ರೈತ ಮತ್ತು ಸೈನಿಕರ ಜಿಲ್ಲಾಅಧ್ಯಕ್ಷರಾದ ಓಂಕಾರ್ ಜಿಎಂ ರೈತ ಮುಖಂಡ ರವಿಗೌಡ ಅಮರೇಶ ಹತ್ತಿಗುಡ್ಡ ಮಲ್ಲದಗುಡ್ಡ, ವನಸಿರಿ ಫೌಂಡೇಶನ್ ಜಿಲ್ಲಾ ಸಾಮಾಜಿಕ ಜಾಲ ತಾಣ ಅಧ್ಯಕ್ಷ ಮಂಜುನಾಥ ಗಾಣಿಗೇರ್, ಬೂದೇಶ ಮರಾಠಿ, ದುರ್ಗೇಶ್ ಡಿಎಸ್ಪಿ , ರುದ್ರಗೌಡ, ಮಹಾಂತೇಶ ಉಪ್ಪಾರ್, ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಊರ್ಮಿಳಾ ನಲ್ಲಾ, ಉಪಾಧ್ಯಕ್ಷೆ ಕವಿತಾ ಶ್ರೀನಿವಾಸ್, ಕಾರ್ಯದರ್ಶಿ ಅಶೋಕ್ ನಲ್ಲ, ಸದಸ್ಯರಾದ ದಿಪ್ತೀ ಸತೀಶ್,ಖಾಜಾ ಹುಸೇನ್, ಸೇರಿದಂತೆ ಹಲವರಿದ್ದರು

ವರದಿ: ಅವಿನಾಶ್ ದೇಶಪಾಂಡೆ ✍️

LEAVE A REPLY

Please enter your comment!
Please enter your name here