ಸಿಂಧನೂರು ತಾಲೂಕಿನ ಗೋರೇಬಾಳ ಕ್ಯಾಂಪ್ ನಲ್ಲಿ ಪರಿಮಳ ಪ್ರಾಣೇಶ್ ಎಂಬ ಬಡಕುಟುಂಬ ಕೋರೋನಾ ಅಲೆಯಲ್ಲಿ ಸಂಕಷ್ಟದಿಂದ ಅನಾರೋಗ್ಯ ಹಾಗೂ ಹಸಿವಿನಿಂದ ಬಳಲುತ್ತಿದ್ದ ಕುಟುಂಬಕ್ಕೆ ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಜೀನೂರು ಅವರು ಭೇಟಿ ಮಾಡಿ, ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿ, ಕುಟುಂಬಕ್ಕೆ ಧೈರ್ಯದಿಂದ ಇರುವಂತೆ ಹೇಳಿ, ಉಚಿತವಾಗಿ ಜಾಷಧಗಳನ್ನು ವಿತರಿಸಿದರು. ನಂತರ ಅಗತ್ಯ ವಸ್ತುಗಳ ಕೊಂಡುಕೊಳ್ಳಲು ಕುಟುಂಬಕ್ಕೆ ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಜೀನೂರು ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ನಲ್ಲ ಅವರು ಕುಟುಂಬಕ್ಕೆ ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ, ಗೌರವಾಧ್ಯಕ್ಷ ಹನುಮೇಶ ಜಾಗೀರದಾರ ಇದ್ದರು.