ಚಿಕ್ಕೋಬನಹಳ್ಳಿಯಲ್ಲಿ ಕ.ಹಾ.ಮ.ಪ್ರಾಯೋಜಿತ ಆರೋಗ್ಯ ಅರಿವು ಕಾರ್ಯಕ್ರಮ

0
98

ಕೂಡ್ಲಿಗಿ: ತಾಲೂಕಿನ ಚಿಕ್ಕೋಬನಹಳ್ಳಿ ಕ.ಹಾ.ಮ.ಪ್ರಯೋಜಿತ ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಬಣವಿಕಲ್ಲು ಸಮುದಾಯ ಆರೋಗ್ಯ ಅಧಿಕಾರಿ ಎನ್.ರೇಣುಕಮ್ಮ ಕರ್ನಾಟಕ ಹಾಲು ಮಂಡಳಿಯ ಸಂಜೀವಿನಿ ಯೋಜನೆಯಡಿಯಲ್ಲಿ ಮಾತನಾಡುತ್ತಾ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಹಿಳೆಯರಿಗೆ ಮತ್ತು ಮಕ್ಕಳಿಗೆ,ಆರೋಗ್ಯ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಅರಿವು ಜಾಗೃತಿ ವಿಚಾರಗಳನ್ನು ತಿಳಿಸಿದರು.
ಈ ಸಮಯದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕ ಯಾಸ್ಮೀನ್ ಬಾನು.ಸಂಡೂರು ರಾ.ಬ.ಕೊ.ಹಾಲು ಒಕ್ಕೂಟದ ಇ.ಪ್ರಕಾಶ, ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಉಪ ವ್ಯವಸ್ಥಾಪಕರು,ಕ್ಷೇತ್ರ ಸಾಹಾಯಕರಾದ ಮಂಜುಳಾ ಸಿ.ಗಾಣದವರ ಹಾಗೂ ಶಾಂತಕುಮಾರಿ. ರಾಬಕೊ ಹಾಲು ಒಕ್ಕೂಟದ ಸ್ಟೆಪ್ ಅಧಿಕಾರಿ,ಸಂಘದ ಆಡಳಿತ ಮಂಡಳಿ ಸದಸ್ಯರು,ಯೋಜನೆಯ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here