ಕೀಟ ನಾಶಕ ಸಿಂಪರಣೆಯಿಂದ ಆರು ರೋಗಗಳಿಂದ ಸುರಕ್ಷತೆ ಪಡೆಯಬಹುದು; ವಿರುಪಾಕ್ಷ,

0
36

ಸಂಡೂರು:ಫೆ:13: ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಆಯ್ದ ಗ್ರಾಮಗಳಲ್ಲಿ ಒಳಾಂಗಣ ಕೀಟನಾಶಕ ಸಿಂಪರಣೆ ಕಾರ್ಯ ಕುರಿತು ಪ್ರತಿ ವಾರ್ಡಿನ ಹಲವು ಕಡೆ ಗುಂಪು ಸಭೆಗಳ ಮೂಲಕ ಜಿಲ್ಲಾ ಮಲೇರಿಯಾ ನಿಯಂತ್ರಣ ಮೇಲ್ವಿಚಾರಣೆ ತಂಡದಿಂದ ಜಾಗೃತಿ ಕಾರ್ಯಕ್ರಮ ನಡೆಯಿತು,

ಸೊಳ್ಳೆ ನಿಯಂತ್ರಣಕ್ಕೆ ತೆಗೆದು ಕೊಂಡ ಕ್ರಮ ಕುರಿತು ಮಾಹಿತಿ ನೀಡಿದ ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಟಿ.ವಿರುಪಾಕ್ಷ ಅವರು ಇದೇ ತಿಂಗಳ 14 ರಿಂದ ತೋರಣಗಲ್ಲು, ತೋರಣಗಲ್ಲು ರೈಲ್ವೆ ನಿಲ್ದಾಣ, ಮತ್ತು ವಡ್ಡು ಗ್ರಾಮಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಒಳಾಂಗಣ ಸಿಂಪರಣೆ ಕಾರ್ಯ ಹಮ್ಮಿಕೊಳ್ಳಲಾಗುವುದು, ಸಿಂಪರಣೆ ಕಾರ್ಯ ಯಶಸ್ವಿಯಾಗಲು ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದರು, ಸಿಂಪರಣೆ ಕಾರ್ಯ ಹಮ್ಮಿಕೊಂಡ ಗ್ರಾಮಗಳಿಗೆ ಸಂಬಂಧಿಸಿದ ಗ್ರಾಮ ಪಂಚಾಯತಿ ಸಭೆಗಳಲ್ಲಿ ಮಾಹಿತಿಯನ್ನು ನೀಡಲಾಗಿದ್ದು, ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ, ಮೆದುಳು ಜ್ವರ,ಆನೆಕಾಲು ರೋಗ,ಜೀಕಾ ದಂತಹ ಕಾಯಿಲೆಗಳನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣವು ಅತೀ ಮುಖ್ಯವಾಗಿದ್ದು,ಪ್ರತಿ ಆರು ತಿಂಗಳಿಗೊಮ್ಮೆ ಸಿಂಪರಣೆ ಕಾರ್ಯ ಹಮ್ಮಿಕೊಳ್ಳಲಾಗುವುದು, ಮನೆಗಳಿಗೆ ಸಿಂಪರಣೆ ಮಾಡಲು ಸಿಬ್ಬಂದಿಯವರು ಬಂದಾಗ ಸಹಕಾರ ನೀಡಿದರೆ ಸೊಳ್ಳೆಗಳ ನಿಯಂತ್ರಣ ಮಾಡಲು ಸಾಧ್ಯವಿದೆ, ಸಿಂಪರಣೆ ಸಿಬ್ಬಂದಿ ಬಂದಾಗ ಬಾಗಿಲು ಹಾಕಿ ಕೊಂಡು ಪಕ್ಕದ ಮನೆಗೆ ಹೋಗ ಬಾರದು, ಸಾರ್ವಜನಿಕರು ಸಹಕಾರ ನೀಡಬೇಕು, ರೋಗಗಳಿಂದ ರಕ್ಷಣೆ ಪಡೆಯಲು ಸಿಂಪರಣೆ ಕಾರ್ಯದ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣ ತಂಡದ ಮೇಲ್ವಿಚಾರಣಾ ಸಿಬ್ಬಂದಿ ರವೀಂದ್ರ ಜಿನಗ,ಶಕುಂತಲಾ, ನಾಗರಾಜ,ಮರಿಬಸವನಗೌಡ,ಸಾಗರ್,ನಾಗರತ್ನ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here