ಕೊಟ್ಟೂರು: ಜ.26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ನಡೆಯುವ ನಂದಿ ಧ್ವಜ ಕುಣಿತಕ್ಕೆ ಕೊಟ್ಟೂರು ತಾಲ್ಲೂಕಿನ ಚಪ್ಪರದಹಳ್ಳಿ ಕೆ. ಶಿವರಾಜ್ ಆಯ್ಕೆಯಾಗಿದ್ದಾರೆ.
ಇವರ ರಾಜ್ಯದಾದ್ಯಂತ ಆಯ್ಕೆಯಾಗಿರುವ 18 ಜನರಲ್ಲಿ ಕೆ. ಶಿವರಾಜ್ ಆಯ್ಕೆಯಾ ಗಿರುವುದು ವಿಜಯನಗರ ಜಿಲ್ಲೆಗೆ ಸಂಜೆ ಗೌರವವಾಗಿದೆ. ಸಮಳ ಹಾಗೂ ನಂದಿ ಧ್ವಜ ಕುಣಿತಕ್ಕೆ ಕೊಟ್ಟೂರು ತಾಲ್ಲೂಕು ರಾಜ್ಯಕ್ಕೆ ಹೆಸರಾಗಿದ್ದು, ದೇಶದಾದ್ಯಂತ ನಡೆಯುವ ಉತ್ಸವ ಹಾಗೂ ಸಭೆ ಸಮಾ ರಂಭಗಳಲ್ಲಿ ಈ ಕಲೆಯನ್ನು ಪ್ರದರ್ಶಿಸಿ ಜನ ಮನ್ನಣೆಗೆ ಪಾತ್ರರಾಗಿದ್ದಾರೆ.
ವರದಿ: ಶಿವರಾಜ್ ಕನ್ನಡಿಗ