ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದ ಸುತ್ತ ಸ್ವಚ್ಛತೆ, ಶಾಲೆಯ ಆವರಣದಲ್ಲಿರುವ ಗಿಡಗಳ ಸುತ್ತ ಸ್ವಚ್ಛತೆ ಮಾಡಿ, ಗಿಡಗಳಿಗೆ ನೀರುಣಿಸುವ ಕಾಯಕ ಮಾಡಿದ ಗ್ರಾಮಸ್ಥರು, ಕುಡಿಯುವ ನೀರಿನ ತೊಟ್ಟೆಯನ್ನು ಸ್ವಚ್ಛತೆ ಮಾಡಿದರು.
ನಿರಂತರವಾಗಿ ಮಲ್ಲಾಪುರ ಗ್ರಾಮದ ಯುವಕರಿಂದ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿನಿತ್ಯ ವಿಭಿನ್ನ ರೀತಿಯಲ್ಲಿ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಮಲ್ಲಾಪೂರ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಯುವ ಪಡೆ ಸಜ್ಜಾಗಿದೆ ಎಂದು ಹೇಳಬಹುದು.
ಈ ಸಂದರ್ಭದಲ್ಲಿ, ಅಮರೇಗೌಡ ಮಲ್ಲಾಪುರ, ಪರಶುರಾಮ ಪ್ರಾಂಶುಪಾಲರು, ಬಸವರಾಜ್ ಉಪನ್ಯಾಸಕರು, ಮುದುಕಪ್ಪ ಉಪನ್ಯಾಸಕರು, ಆನಂದ್ ಮಾಸ್ಟರ್, ದೇವರೆಡ್ಡಿ ಕೆಸರಟ್ಟಿ, ದುಗ್ಗಪ್ಪ ಅಧ್ಯಕ್ಷ, ವೀರೇಶ್ ಕೆ, ಮಂಜುನಾಥ್ ಎಲ್,ಐ,ಸಿ ಆಫೀಸರ್, ಮಂಜುನಾಥ ಹೆಚ್, ದುರ್ಗಪ್ಪ ಚಲವಾದಿ, ಇನ್ನು ಹಲವಾರು ಯುವಕರು ಭಾಗಿಯಾಗಿದ್ದರು.
ವರದಿ: ಅವಿನಾಶ ದೇಶಪಾಂಡೆ