ನೂತನವಾಗಿ ನೇಮಕಗೊಂಡ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಕಾರುಣ್ಯಾಶ್ರಮದಲ್ಲಿ ಸನ್ಮಾನ

0
81

ಕರ್ನಾಟಕ ಸರ್ವ ಸಂಪಾದಕರು ಹಾಗೂ ಪತ್ರಕರ್ತರ ಸಂಘ (ರಿ) ಬೆಂಗಳೂರು ವತಿಯಿಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಪದಾಧಿಕಾರಿಗಳನ್ನಾಗಿ ಶ್ರೀ ಹನುಮಂತಪ್ಪ ಗೋಡಿಹಾಳ ಗೌರವಾಧ್ಯಕ್ಷರು, ಶ್ರೀ ಪಂಪಾಪತಿ.ಬಿ.ಹೂವಿನಬಾವಿ ಅಧ್ಯಕ್ಷರು, ಶ್ರೀ ವೀರೇಶ ಹೊಸಳ್ಳಿ, ಉಪಾಧ್ಯಕ್ಷರು ಶ್ರೀ ನಾಗರಾಜ್ ಬೊಮ್ಮನಾಳ, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಶ್ರೀ.ಬಿ.ಮುನಿರಾಜು, ಇವರನ್ನು ರಾಜ್ಯಾಧ್ಯಕ್ಷರು ಕರ್ನಾಟಕ ಸರ್ವ ಸಂಪಾದಕರು ಹಾಗೂ ಪತ್ರಕರ್ತರ ಸಂಘ (ರಿ) ಇವರು ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶ್ರೀ ಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಮತ್ತು ವಯಸ್ಕರ ಬುದ್ಧಿಮಾಂದ್ಯ ಆಶ್ರಮ ಕುಷ್ಟಗಿ ರಸ್ತೆ ಸಿಂಧನೂರು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಪಂಪಾಪತಿ ಹೂವಿನಬಾವಿ ಮಾತನಾಡಿ ಕಾರುಣ್ಯ ಸೇವೆ ಹಲವಾರು ಅನಾಥರ ಬಾಳಿಗೆ ದಾರಿದೀಪವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ನಂತರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾಗರಾಜ ಬೊಮ್ಮನಾಳ ನಮ್ಮ ಸಂಘಟನೆ ನಿರಂತರವಾಗಿ ಕಾರುಣ್ಯದ ಜೊತೆ ಇರುತ್ತದೆ ಇಂತಹ ಸಮಾಜಪರ ಅನಾಥಪರ ಕಾರ್ಯ ಮಾಡುವುದರಲ್ಲಿ ನಮಗೆ ಆತ್ಮತೃಪ್ತಿ ದೊರೆತಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಶ್ರೀ ಚನ್ನಬಸವ ಸ್ವಾಮಿ ಹಿರೇಮಠ ಮತ್ತು ಮೇಲ್ವಿಚಾರಕರಾದ ಶ್ರೀಮತಿ ಸುಜಾತ ಚನ್ನಬಸವಸ್ವಾಮಿ ಹಿರೇಮಠ ಇವರುಗಳಿಗೆ ಸನ್ಮಾನಿಸಿ ಗೌರವಿಸಿ ವೃದ್ಧರ ಹಾಗೂ ಬುದ್ಧಿಮಾಂದ್ಯರ ವತಿಯಿಂದ ಪ್ರಾರ್ಥಿಸಿ ಶುಭಕೋರಿ ಆಶೀರ್ವದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಶ್ರಮದ ಸಿಬ್ಬಂದಿಗಳಾದ ಶ್ರೀ ಗೀತಾ ವ್ಯವಸ್ಥಾಪಕರು ಕಾರುಣ್ಯ ಆಶ್ರಮ ಶ್ರೀ ಮಹೇಶ ಕುಮಾರ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಕಾರುಣ್ಯ ಆಶ್ರಮ ಶ್ರೀ ಪಂಪಯ್ಯ ಸ್ವಾಮಿ ಕಲಾವಿದರು ಹಾಗೂ ಸೇವಾಕರ್ತರು ಕಾರುಣ್ಯ ಆಶ್ರಮ ಶ್ರೀ ಸುರೇಶ ಮುಖ್ಯ ಸೇವಾಕರ್ತರು ಕಾರುಣ್ಯ ಆಶ್ರಮ ಶ್ರೀಲಕ್ಷ್ಮೀನಾರಾಯಣ ಮುಖ್ಯ ಸೇವಾಕರ್ತರು ಕಾರುಣ್ಯ ಆಶ್ರಮ ಶ್ರೀಮತಿ ಲಕ್ಷ್ಮಿ ಅಡುಗೆದಾರರು ಕಾರುಣ್ಯ ಆಶ್ರಮ ಶ್ರೀಮತಿ ರತ್ನ ಅಡುಗೆದಾರರು ಕಾರುಣ್ಯ ಆಶ್ರಮ ಶ್ರೀ ಸಂಗನಗೌಡ ಗೋನವಾರ ಸೇವಾಕರ್ತರು ಕಾರುಣ್ಯ ಆಶ್ರಮ ಶ್ರೀ ಗುರುರಾಜ ಶ್ರೇಷ್ಠಿ ಸೇವಾಕರ್ತರು ಕಾರುಣ್ಯ ಆಶ್ರಮ ಮತ್ತು ಸಿಬ್ಬಂದಿಗಳು ಟ್ರಸ್ಟ್ ನ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here