ಕೊಟ್ಟೂರು:ಜುಲೈ:06:-ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಹುಲಿಗೇಶ್ ತೆಗ್ಗಿ ನಕೇರಿ ಮರಣ ಹೊಂದಿದ್ದು. ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಪ್ರವಾಸಿ ಮಂದಿರದಲ್ಲಿ ಕೊರವರ ಕೊಟ್ರೇಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆದರು.
ಉಪಾಧ್ಯಕ್ಷ ಸ್ಥಾನಕ್ಕೆ ಡಿ ಸಿದ್ಧಪ್ಪ, ಪ್ರಧಾನ ಕಾರ್ಯದರ್ಶಿ ಬದ್ದಿ ಮಂಜುನಾಥ, ಸಹ ಕಾರ್ಯದರ್ಶಿ ಎಚ್ ನಾಗರಾಜ್,ಖಜಾಂಚಿ ಎಸ್ ಪ್ರಕಾಶ್. ಆಯ್ಕೆ ಆದರು.
ಈ ಸಮಯದಲ್ಲಿ ನೂತನ ಕೊಟ್ಟೂರು ತಾಲೂಕಿನ ಅಧ್ಯಕ್ಷ ಕೆ ಕೊಟ್ರೇಶ್ ಮಾತನಾಡಿ ಸಂಘದ ಏಳಿಗೆಗಾಗಿ ಮತ್ತು ಪದಾಧಿಕಾರಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಪಿ ಸತ್ಯನಾರಾಯಣ, ಉಪಾಧ್ಯಕ್ಷ ಉಜ್ಜಿನಿ ರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ . ಜೋಷಿ, ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಲಾಯಿತು.ಈ ಸಂದರ್ಭದಲ್ಲಿ ತಾಲೂಕಿನ ಪತ್ರಕರ್ತರು ಜಿ ಸೋಮಶೇಖರ್ , ದೇವರಮನಿ ಸುರೇಶ್, ಚಂದ್ರಶೇಖರ,ಗುರು ಪ್ರಸಾದ್, ರವಿಕುಮಾರ್, ಚಿಗಟೇರಿ ಕೊಟ್ರೇಶ್, ವೈ ಹರ್ಷವರ್ಧನ್, ವಿಜಯ್ ಕುಮಾರ್. ಪತ್ರಕರ್ತರ ಇತರರು ಇದ್ದರು
ವರದಿ: ಶಿವರಾಜ್ ಕನ್ನಡಿಗ