ಕಂಪ್ಲಿ:ಜುಲೈ:06:-ಸ್ವಚ್ಚತೆಗೆಂದು ಸರ್ಕಾರ ಎಷ್ಟೇ ಹಣ ಖರ್ಚು ಮಾಡಿದರೂ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತಹ ಅಧಿಕಾರಿಗಳು ಇಲ್ಲದಿದ್ದಾಗ ಎಲ್ಲವೂ ವ್ಯರ್ಥ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ನಂ 10 ಮುದ್ದಾಪುರ ಗ್ರಾಮ ಪಂಚಾಯಿತಿಯ ವಾರ್ಡ್ ನಂಬರ್ 2 ರ ಅಂಗನವಾಡಿ ಕೇಂದ್ರದ ಮುಂದೆ ಚರಂಡಿ ತುಂಬೆಲ್ಲಾ ಕಸ ಹಂದಿಗಳ ಕಾಟ ಅಂಗನವಾಡಿ ಜಾಸ್ತಿಯಾಗಿದ್ದು ಶಾಲೆ ಮಕ್ಕಳು ಮತ್ತು ಅಕ್ಕ ಪಕ್ಕದ ಮನೆಗಳ ವೃದ್ಧರು ಇದರ ದುರ್ವಾಸನೆಯಿಂದ ಡೆಂಗು,ಚಿಕನ್ ಗುನ್ನೆ ಮಲೇರಿಯಾ ರೋಗ ಗಳಿಂದ ಬಳಲುತ್ತಿದ್ದಾರೆ.
ಸಂಬಂಡಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ವಚ್ಚತೆಯ ಕಡೆಗೆ ಮುಖ ಮಾಡುತ್ತಾರೋ ಅಥವಾ ಜನರನ್ನು ಮತ್ತಷ್ಟು ರೋಗಗಳಿಗೆ ದೂಡುತ್ತಾರೋ ಕಾದು ನೋಡಬೇಕಿದೆ
ವರದಿ:-ಬಸವರಾಜ್ ಕಂಪ್ಲಿ