ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾಗಿ ಬಡಿಗೇರ್ ನಾಗರಾಜ ಆಯ್ಕೆ.

0
374

ವಿಜಯನಗರ,ಜುಲೈ:15:- ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ 14.07.2022 ರಂದು ಗುರುವಾರ ಕರ್ನಾಟಕ ಪತ್ರಕರ್ತರ ಸಂಘ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಸಭೆಯಲ್ಲಿ ಕೂಡ್ಲಿಗಿ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡುವುದು ಮತ್ತು ವಿಜಯನಗರ ಜಿಲ್ಲೆಯ ಜಿಲ್ಲಾ ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ಸಭೆಯನ್ನು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ರವರ ಸಮ್ಮುಖದಲ್ಲಿ ಸಭೆಯನ್ನು ಕರೆಯಲಾಯಿತು.

ಈ ಸಭೆಯಲ್ಲಿ ಕೂಡ್ಲಿಗಿ ತಾಲೂಕಿನ ಕರ್ನಾಟಕದ ಸಂಘದ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರು ಒಮ್ಮತದಿಂದ ಕರ್ನಾಟಕ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷರನ್ನಾಗಿ ನಾಗರಾಜ ಬಡಿಗೇರ್ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದು ಹಾಗೇ ವಿಜಯನಗರ ಜಿಲ್ಲೆಯ ಅಧ್ಯಕ್ಷರಾಗಿ ಕೆ.ಎಸ್ ಮುರಳಿಧರ್, ಜಿಲ್ಲೆಯ ಗೌರವ ಅಧ್ಯಕ್ಷರಾಗಿ ಡಿ‌ಎಂ ಈಶ್ವರಪ್ಪ ಸಿದ್ದಾಪುರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕರ್ನಾಟಕ ಪತ್ರಕರ್ತರ ಸಂಘದ ಕೂಡ್ಲಿಗಿ ತಾಲೂಕು ಗೌರವಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಮೀನಕೆರೆ, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಸಾಲುಮನಿ ರಾಘವೇಂದ್ರ, ಉಪಾಧ್ಯಕ್ಷರಾಗಿ ಬಸವರಾಜ ಸ್ವಾಮಿ, ಸೋಲ್ಲೇಶ, ತಾಲೂಕು ಖಜಾಂಚಿಯಾಗಿ ಹೂಡೇಂ ಮಂಜುನಾಥ, ಕಾರ್ಯಧ್ಯಕ್ಷರಾಗಿ ಗುನ್ನಳ್ಳಿ ರಾಘವೇಂದ್ರ, ಸಹ ಕಾರ್ಯದರ್ಶಿ ತಿಪ್ಪೇನಹಳ್ಳಿ ಮಾರೇಶ್, ಹೊಸಹಳ್ಳಿ ವೆಂಕಟೇಶ್, ಅಮಲಾಪುರದ ಅಂಜಿನಪ್ಪ, ಅವರುಗಳನ್ನು ಆಯ್ಕೆ ಮಾಡಲಾಯಿತು.

ವಿಜಯನಗರ ಜಿಲ್ಲೆಯ ಗೌರವ ಅಧ್ಯಕ್ಷರಾದ ಡಿ.ಎಂ ಈಶ್ವರಪ್ಪ ಸಿದ್ದಾಪುರ ಮಾತನಾಡಿ. ನಾನು ಬೇರೆ ಬೇರೆ ಸಂಘದಲ್ಲಿ ಸಾಕಷ್ಟು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೆ ಯಾವ ಸಂಘದಲ್ಲಿಯೂ ಇಂಥ ಕಾರ್ಯಚಟುವಟಿಕೆಗಳು ಇಲ್ಲ ಯಾವ ಸಂಘದಲ್ಲಿ ಪತ್ರಕರ್ತರಿಗೆ ಸೌಲಭ್ಯಗಳು ಇಲ್ಲ ಆದರೆ ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಇರುವ ಅನುಕೂಲಗಳನ್ನು ನಾನು ಮೆಚ್ಚಿಕೊಂಡು ಈ ಸದಸ್ಯತ್ವವನ್ನು ಪಡೆದುಕೊಂಡಿದ್ದು ಈ ಸಂಘದಲ್ಲಿ ನನಗೆ ಕೊಟ್ಟಂತ ಹುದ್ದೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ, ನಾವೆಲ್ಲರೂ ನಮ್ಮ ಸಂಘದ ವತಿಯಿಂದ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ್, ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರಾದ ರಾಜು ಪಾಳೇಗಾರ್, ಜಿ.ಟಿ.ರಾಜಶೇಖರ್ ನಂದೀಶ್ ನಾಯಕ, ಇತರೆ ತಾಲೂಕಿನ ಪತ್ರಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here