ಅಂಬಳಿ ಶ್ರೀ ಕಲ್ಲೇಶ್ವರ ಸ್ವಾಮಿಗೆ ಶ್ರಾವಣ ಮಾಸದ ಮಹಾ ಅಭಿಷೇಕ: ಐತಿಹಾಸಿಕ ದೇವಸ್ಥಾನ

0
164

ಕೊಟ್ಟೂರು:ಜುಲೈ:26:-ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಆಂಬಳಿ ಗ್ರಾಮ ಪಂಚಾಯಿತಿಗೆ ಸೇರಿದ ಅಂಬಳಿ ಗ್ರಾಮದಲ್ಲಿ ಐತಿಹಾಸಿಕ ಶ್ರೀ ಕಲ್ಲೇಶ್ವರ ಸ್ವಾಮಿಯ ದೇವಸ್ಥಾನವು ತನ್ನದೇ ಆದ ಭಕ್ತಿ ವೃಂದವನ್ನು ಹೊಂದಿದ್ದು ಪ್ರತಿ ವರ್ಷದಂತೆ ಶ್ರಾವಣ ಮಾಸದ ಮೊದಲ ಪೂಜೆ ಅಭಿಷೇಕದ ಕಾರ್ಯಕ್ರಮಗಳು ನಡೆಯಲಿದೆ

ಇದೇ ತಿಂಗಳು 28 ರಿಂದ ಪ್ರಾರಂಭವಾಗಿ ಆಗಸ್ಟ್ 27ರವರಗೆ ಶ್ರೀ ಕಲ್ಲೇಶ್ವರ ಸ್ವಾಮಿಯ ನಿತ್ಯ ಅಭಿಷೇಕವಿರುತ್ತದೆ ಅಭೀಷೇಕ ಮಾಡುವ ಭಕ್ತಾಧಿ ಗಳು ಪೂಜೆ ಮಾಡಿಸಬಹುದು ಶ್ರೀ ಕಲ್ಲೇಶ್ವರ ಸ್ವಾಮಿಯ ಅಭಿಷೇಕವು ಆಗಸ್ಟ್ 27 ರ0ದು ಮುಕ್ತಾಯವಾಗಲಿದೆ. ಧನ, ಧಾನ್ಯ, ಭಕ್ತಿ ಸಮರ್ಪಣೆ ಮಾಡುವ ಭಕ್ತಾಧಿಗಳು ಶ್ರೀ ಸ್ವಾಮಿಯ ಸೇವೆ ಮಾಡಬಹುದು.

ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು ಹಾಗೂ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಅಂಬಳಿ ಮಹಾ ದೈವಸ್ಥರು ಮುಖಂಡರು ಹಾಗೂ ಅಂಬಳಿಯ ಗ್ರಾಮಸ್ಥರು ತಿಳಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here