ಕೊಟ್ಟೂರು ಪಟ್ಟಣದಲ್ಲಿ ಶ್ರೀ ವಿಠ್ಠಲ-ರುಕ್ಮಿಣಿ ದೇವರ ೩೦ನೇ ವರ್ಷದ ದಿಂಡಿ ಉತ್ಸವ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಭಾವಸಾರ ಕ್ಷತ್ರಿಯ ಸಮಾಜ (ರಿ) ಇವರು ೩೦ನೇ ವರ್ಷದ ಶ್ರೀ ಪಾಂಡುರಂಗ ರುಕ್ಮಿಣಿ ದೇವರದಿಂದ ಮಹೋತ್ಸವ ಹಮ್ಮಿಕೊಂಡಿದ್ದು, ಸದರಿ 3 ದಿನಗಳ ಕಾಲ ನಡೆಯಿತು. ಪ್ರಥಮ ದಿನ ಪ್ರತಿಷ್ಠಾಪನೆ, ಭಜನೆ, ಕೀರ್ತನೆ, ಅಖಂಡ ವೀಣಾ ಜಾಗರಣೆ, ಜ್ಞಾನೇಶ್ವರಿ ಪಾರಾಯಣ, ನಾಮಜಪ, ಕಾಲಾಕೀರ್ತನೆ, ಮತ್ತು ೩ನೇ ದಿನ ನಗರ ಪ್ರದಕ್ಷಿಣೆ ಜರುಗಿತು. ಭಾವಸಾರ ಕ್ಷತ್ರಿಯ ಸಮಾಜದ ಜಿಲ್ಲೆಯ ಎಲ್ಲಾ ಪ್ರಮುಖ ನಗರದಿಂದ ಕೀರ್ತನಕಾರರು, ಭಜನಾ ಮಂಡಳಿಯವರು ಆಗಮಿಸಿದ್ದು, ಹಿರಿಯರು, ಮಹಿಳೆಯರು, ಮಕ್ಕಳು ಊರಿನ ಪ್ರಮುಖರು ಪಾಂಡುರಂಗ ರುಕ್ಮಿಣಿ ದಿಂಡಿ ಉತ್ಸವದಲ್ಲಿ ಭಾಗವಹಿಸಿ ದೇವರ ಆಶೀರ್ವಾದಕ್ಕೆ ಪಾತ್ರರಾದರು.
ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸದ್ಭಕ್ತ ಮಂಡಳಿಗೆ ಸಮಾಜದ ಅಧ್ಯಕ್ಷರು, ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ವರದಿ: ಶಿವರಾಜ್ ಕನ್ನಡಿಗ