ಕೊಟ್ಟೂರು: ಮರಿಕೊಟ್ಟೂರೇಶ್ವರ ದೇವಸ್ಥಾನ ದಿಂದ ಸೋಮವಾರ ಸಂಜೆ 6-30 ಗಂಟೆಗೆ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ಪಟ್ಟಣ ಪಂಚಾಯಿತಿ ಕೊಟ್ಟೂರು ಇವರ ಸಹಯೋಗದೊಂದಿಗೆ ಮತದಾನ ಜಾಗೃತಿ ಹಾಗೂ ನೋಂದಣಿ ಅಭಿಮಾನವನ್ನು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಚಾಲನೆ
ನೀಡಿದರು.
ಪಟ್ಟಣ ಪಂಚಾಯಿತಿ ಕಚೇರಿಯಿಂದ ಬಸ್ ನಿಲ್ದಾಣ ಸರ್ಕಲ್ ವರೆಗೆ ಬೈಕ್ ಮೆರವಣಿಗೆ ಮೂಲಕ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಜಿ ಪರಮೇಶ್ವರಪ್ಪ. ಮುಖ್ಯ ಅಧಿಕಾರಿಗಳಾದ ನಸುರುಲ್ಲಾ ಪಟ್ಟಣ ಪಂಚಾಯಿತಿ ಕೊಟ್ಟೂರು ಹಾಗೂ ತಾಲೂಕ ಸ್ವೀಪ್ ಸಮಿತಿ ನೂಡಲ್ ಅಧಿಕಾರಿ ಎಂ ಶಶಿಧರ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಹಾಗೂ ಬಿ ಎಲ್ ಓ ಗಳು ಭಾಗವಹಿಸಿದ್ದರು
ವರದಿ: ಶಿವರಾಜ್ ಕನ್ನಡಿಗ