ಕೊಟ್ಟೂರು:ಜೂನ್:26:-
ಮಾದಕ ದ್ರವ್ಯ ಸಂಗ್ರಹಿಸುವುದು ಅಕ್ರಮ ಮಾರಾಟ ಮಾಡುವುದು ದೊಡ್ಡ ಪ್ರಮಾಣದ ಅಪರಾದವಾಗಿದ್ದು ಯಾವುದೇ ಕಾರಣಕ್ಕೂ ಇಂತಹವುಗಳನ್ನು ಯಾರೊಬ್ಬರು ಹೊಂದುವುದು ಪ್ರೋತ್ಸಾಹಿಸುವುದು ಕಂಡು ಬಂದರೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ ಹೆಚ್.ಕೆಂಚಾರೆಡ್ಡಿ ಹೇಳಿದರು.
ಭಾನುವಾರ ಪಟ್ಟಣ ಪೊಲೀಸ್ಠಾಣೆ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಉದ್ದೇಶಿಸಿ ಅವರು ಮಾತನಾಡಿದರು.
ಮಾದಕ ಔಷದಿಗಳಿಗೆ ಯುವಕರು ಹೆಚ್ಚಾಗಿ ಆಕರ್ಷಿತರಾಗುವ ಮೂಲಕ ತಮಗೆ ಗೊತ್ತಿಲ್ಲದೆ ಅಪಾಯವನ್ನು ತನ್ನೊಟ್ಟಿಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರ ವಹಿಸಿ ಮಕ್ಕಳ ಅದರಲ್ಲೂ ಯುವಕರು ಇಂತಹ ಗೀಳಿಗೆ ಮುಂದಾಗುವುದಕ್ಕೆ ಬಿಡಬಾರದು ಎಂದು ಅವರು ಹೇಳಿದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಜಯಕೃಷ್ಣ ಮತ್ತಿತರರು ಇದ್ದರು.
ವರದಿ: ಶಿವರಾಜ್ ಕನ್ನಡಿಗ