ಕೊಟ್ಟೂರು: ಪಟ್ಟಣದ ಕೋಟೆಭಾಗದ ವೀರಭದ್ರೇಶ್ವರ ಸ್ವಾಮಿ ಕಾರ್ತಿಕೋತ್ಸವ ಪ್ರಯುಕ್ತ ಮಂಗಳವಾರ ಸಂಜೆ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಿ ಸಮಸ್ತ ಭಕ್ತ ಸಮೂಹದಲ್ಲಿ ಸಂಭ್ರಮದೊಂದಿಗೆ ಕ್ರಿಯಾ ಮೂರ್ತಿಗಳು ಶಿವ ಪ್ರಕಾಶ ಕೊಟ್ಟೂರು ದೇವರು ದೀಪೋತ್ಸವಕ್ಕೇ ಚಾಲನೆ ನೀಡಿದರು.
ಸಮಳ,ನಂದಿಧ್ವಜ ಮೇಳಗಳ ಸಂಭ್ರಮದಲ್ಲಿ ದೀಪೋತ್ಸವಕ್ಕೇ ಚಾಲನೆ ದೊರೆಯುತ್ತಿದ್ದಂತೆ ಭಕ್ತರು ಪ್ರಣತಿಗೆ ಎಣ್ಣೆ ಭತ್ತಿ ಹಾಕಿ ದೀಪ ಬೆಳಗಿಸಿ ಭಕ್ತಿ ಸಮರ್ಪಿಸಿದರು.
ಚಾಲನೆ ವೇಳೆ ದೈವಸ್ಥರಾದ ಶಿವಕುಮಾರ್ ಗೌಡ, ಕೆ.ಎಸ್.ನಾಗರಾಜ್ ಗೌಡ ಐ.ಧಾರುಕೇಶ್,ಆರ್.ಎಂ.ಗುರುಸ್ವಾಮಿ,ಪಿಎಂ ಈಶ್ವರಯ್ಯ ಅಡಕಿ ಮಂಜುನಾಥ, ಬಣಕಾರ ಬಸವರಾಜ್, ಉಮಾಪತಿ, ಸಿದ್ದನಗೌಡ್ರ, ಜಗದೀಶ್ ಗೌಡ ಮುಂತಾದವರು ಇದ್ದರು.
ವರದಿ: ಶಿವರಾಜ್ ಕನ್ನಡಿಗ