ಹೊಸಪೇಟೆ(ವಿಜಯನಗರ),ಜ.18 : ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷಾಚರಣೆ ಅಂಗವಾಗಿ ಜಿಲ್ಲಾ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯಗಳ ಅಡುಗೆ ಸ್ಪರ್ಧೆಯನ್ನು ಜ.17ರಂದು ಆಯೋಜಿಸಲಾಗಿತ್ತು.
ಎಪಿಎಂಸಿ ಆವರಣದ ಕೃಷಿ ಇಲಾಖೆಯಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 17 ಮಹಿಳೆಯರ ಪೈಕಿ ಅಂತಿಮವಾಗಿ ಶ್ವೇತಾ ಹುಳಿಕೆರೆ, ಭಾರತಿ ಪಾಟೀಲ್ ಹಾಗೂ ಟಿ.ನಾಗರತ್ನ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶರಣಪ್ಪ ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಚಾಲನೆಯನ್ನು ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕರಾದ ಮಂಜುಳಾ ಬಸವರೆಡ್ಡಿ ಭಾಗವಹಿಸಿ ಚಾಲನೆ ನೀಡಿದರು. ಕೃಷಿ ಇಲಾಖೆ ಅಧಿಕಾರಿಗಳಾದ ವಾಮದೇವಕೊಳ್ಳಿ, ಮನೋಹರಗೌಡ, ಸುಭಾನ್ ಎಸ್., ರಾಜ ಜಿ.ಎ ಇದ್ದರು. ತೀರ್ಪುಗಾರರಾಗಿ ಹಗರಿ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ.ಶಿಲ್ಪ, ಮಂಜಣ್ಣ ಪಾಲ್ಗೊಂಡಿದ್ದರು.