ಚಿತ್ರದುರ್ಗ:ಜ:29:-ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಪುರ ಮ್ಯಾಸರಟ್ಟಿ ಗ್ರಾಮದಲ್ಲಿ ವಿಜೃಂಭಣೆಯಿಂದ ಗುಡಿ ತುಂಬಿದ ಪದಿನಾಲ್ದೇವರು
ಸರಿ ಸುಮಾರು 8000 ಜನ ಈ ದೇವರಿಗೆ ಸೇರಿದ ಭಕ್ತರಿದ್ದು ಬರೀ ಹೆಣ್ಣು ಮಕ್ಕಳೇ ಇದರಲ್ಲಿ ಮುಖ್ಯವಾಗಿರುತ್ತಾರೆ, ಅವರು ದೇವಸ್ಥಾನದ ಮುಂದೆ ಸಂಪ್ರಾದಾಯದಂತೆ ಕುಣಿದಾಗಲೇ ದೇವರು ಗುಡಿ ತುಂಬೋದು
ಈ ದೇವರಿಗೆ ಹೊಸಪೇಟೆ ತಾಲೂಕಿನ ಕಮಲಾಪುರ ಚಿತ್ರದುರ್ಗದ ಜಿಲ್ಲೆಯ ಕಲ್ದಾಪುರ ಕೂಡ್ಲಿಗಿ ತಾಲೂಕಿನ ಅರ್ಜುನ್ ಚಿನ್ನನಹಳ್ಳಿ ಗುಡೆಕೋಟೆ ಗ್ರಾಪಂ ಮ್ಯಾಸರಟ್ಟಿ ಮುಂತಾದ ಹಳ್ಳಿಗಳಿಂದ ದೇವರ ಸನ್ನಿಧಾನಕ್ಕೆ ಕಾರ್ಯಕ್ರಮ ಬಂದು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಸಂಪ್ರಾದಾಯಕ ಕಾರ್ಯಕ್ರಮಗಳಿಂದ ಮೆರುಗು ತಂದುಕೊಟ್ಟರು
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಭಾಗ್ಯಮ್ಮ ಪಿಲ್ದೋಬಣ್ಣ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪೂಜಾರಿ ಮಲ್ಲಿಕಾರ್ಜುನ ಮತ್ತು ಊರಿನ ಮುಖಂಡರಾದ ಪೋಸ್ಟ್ ತಿಪ್ಪೆಸ್ವಾಮಿ ಮತ್ತು ಮುತ್ತಯ್, ಸೀತಯ್ಯ, ಮಂಜುನಾಥ, ದಾನವೇಂದ್ರ, ಗಂಡುಗಲಿ ಬಸವರಾಜ ನಾಯಕ, ಮಲ್ಲಿಕಾರ್ಜುನ ನಾಯಕ, ವಿಜಯನಂದನಾಯಕ, ಇಂಡಿ ಬೋರಯ್ಯ,
ಕೆ ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.
ವರದಿ:-ನಂದೀಶ್ ನಾಯಕ