ತಾಲೂಕು ಕಚೇರಿ ಬಳಿ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ನೆನಗುದಿಗೆ ಬಿದ್ದಿದ್ದ ಶುದ್ದನೀರಿನ ಘಟಕ: ಕೌನ್ಸಿಲರ್ ಮತ್ತು ಪಪಂ ಅಧಿಕಾರಿ ಮುತುವರ್ಜಿಯಿಂದ ಚಾಲನೆ

0
293

ಕೊಟ್ಟೂರು:ಮಾ:18:-ಪಟ್ಟಣದ ತಾಲೂಕು ಕಚೇರಿ ಬಳಿ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಶುದ್ದನೀರಿನ ಅನುಕೂಲ ಕಲ್ಪಿಸುವ ನಿಟ್ಟಿನೊಳಗೆ ಶಾಸಕ ಎಸ್.ಭೀಮಾನಾಯ್ಕ್ ಬಂಜಾರ ನಿಗಮದಿಂದ 2019-20 ನೇ ಸಾಲಿನಲ್ಲಿ 11 ಲಕ್ಷ ರೂ.ವೆಚ್ಚದಲ್ಲಿ ಶುದ್ದನೀರಿನ ಘಟಕ ನಿರ್ಮಾಣ ಮಾಡಿದರು.

ಗುತ್ತಿಗೆದಾರ ಪ್ರಕಾಶ್ ಅವರ ನಿರ್ಲಕ್ಷ್ಯದಿಂದ ಇದುವರೆಗೂ ಆ ಶುದ್ಧನೀರಿನ ಘಟಕದಿಂದ ಸಾರ್ವಜನಿಕರ ನೀರಿನ ಬವಣೆ ನೀಗಿಲ್ಲ, ಸಂಬಂಧ ಪಟ್ಟ ಪಟ್ಟಣ ಪಂಚಾಯತಿ ಅಧಿಕಾರಿಗಳು ಈ ಬಗ್ಗೆ ಕೇಳಿದರೆ ಇಂದು, ನಾಳೆ ಸರಿಪಡಿಸುವುದಾಗಿ ನೆಪಗಳನ್ನೇಳುತ್ತಲೇ, ನುಣಿಚಿಕೊಂಡಿದ್ದಾರೆ

ಕಚೇರಿಗೆ ಬರುವ ಜನರ ನೀರಿನ ಬವಣೆ ಕೇಳಲಾರದೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎ.ನಸರುಲ್ಲಾ ಮತ್ತು ಕೌನ್ಸಿಲರ್ ವೀಣಾವಿವೇಕನಂದಗೌಡ ಮುತುವರ್ಜಿಯಿಂದ ಶನಿವಾರ ತಾವೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ,ಪಪಂ ಸಿಬ್ಬಂದಿಯಿಂದ ಘಟಕದ ಸುತ್ತಲು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಘಟಕದಿಂದ ಶುದ್ದನೀರು ದೊರೆಯುವಂತೆ ಕಾರ್ಯಕೈಗೊಂಡರು.

ವರದಿ:ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here