ವಿದ್ಯುತ್ ವೈರ್ ಅಳವಡಿಕೆಯಲ್ಲೂ ನಿರ್ಲಕ್ಷ ತೋರುತ್ತಿರುವ ಸೋಂಬೇರಿಗಳು. !! ಜನರನ್ನು ಸ್ಪರ್ಶಿಸಲು ಕಾದು ಕುಳಿತಿರುವ ವಿದ್ಯುತ್ ದ್ವೀಪದ ತಂತಿಗಳು

0
201

ಕೊಟ್ಟೂರು: ಪಟ್ಟಣದ ಹರಪ್ಪನಹಳ್ಳಿ ರಸ್ತೆ ಮರಿಕೊಟ್ಟೂರೇಶ್ವರ ದೇವಸ್ತಾನದಿಂದ ಬಸ್ಸು ನಿಲ್ದಾಣದವರೆಗೆ ಸರ್ಕಾರದ ಅನುದಾನದಡಿಯಲ್ಲಿ ನೂತನ ರಸ್ತೆ ಮತ್ತು ವಿದ್ಯುತ್ ದ್ವೀಪದ ಕಂಬಗಳ ನಿರ್ಮಾಣ ಮಾಡಿದ್ದು. ಈ ಕಂಬಗಳ ವಿದ್ಯುತ್ ತಂತಿಗಳನ್ನು ಕಂಬದ ಒಳಗೆ ಮುಚ್ಚುವುದು ಬಿಟ್ಟು.ಈ ವಿದ್ಯುತ್ ದ್ವೀಪದ ಕಂಬದ ತಂತಿಗಳಿಗೆ ಹಲವಾರು ಕಡೆ ಪ್ಯಾಚ್ ಹಾಕಿ ತಂತಿಗಳನ್ನು ಹಾಗೆ ಹೊರಗೆ ಬಿಟ್ಟಿದ್ದಾರೆ.

ಈ ರಸ್ತೆಯಲ್ಲಿ ಒಡಾಡುವ ವಾಹನ ಸವಾರರಿಗೆ ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಕೈಗೆ ಸಿಗುವ ಹಾಗೆ ಇರುವ ಅಕಸ್ಮಿಕವಾಗಿ ಜನರಿಗೆ ಈ ವಿದ್ಯುತ್ ತಂತಿಗಳಿಂದ ಕಣ್ಣಿಗೆ ಕಾಣದ ವಿದ್ಯುತ್ ನಿಂದ ಸಾರ್ವಜನಿಕರ ಜೀವಕ್ಕೆ ವಿದ್ಯುತ್ ಸ್ಪರ್ಷಿಸಿ ಅನಾಹುತಗಳು ಉಂಟಾಗುವ ಮೊದಲು.ಈ ದ್ವೀಪದ ತಂತಿಗಳನ್ನು ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ಎಚ್ಚತ್ತಿಕೊಂಡು ಈ ತಂತಿಗಳನ್ನು ವಿದ್ಯುತ್ ಕಂಬದ ಹೊಳಗಡೆ ಸರಿಪಡಿಸಿ ಸಾರ್ವಜನಿಕರನ್ನು ಈ ವಿದ್ಯುತ್ ತಂತಿಗಳಿಂದ ಅನಾಹುತಗಳು ಉಂಟಾಗದಂತೆ ಅಧಿಕಾರಿಗಳು ಕಾಪಡಬೇಕು.ಇಲ್ಲವಾದರೆ ಸಂಭಂದಪಟ್ಟ ಕಛೇರಿಯ ಮುಂದೆ ಉಗ್ರಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ಮಾನವಹಕ್ಕುಗಳ ಜನಾಸೇವಾ ಸಂಸ್ಥೆ (ನೊ)ಕೊಟ್ಟೂರುತಾಲೂಕು ಅದ್ಯಕ್ಷರಾದ ಬಿ.ಸತೀಶ್ ಮತ್ತು ಪಧಾದಿಕಾರಿಗಳಾದ ಎಚ್.ವಿರುಪಾಕ್ಷಿ ,ಕೂಡ್ಲಿಗಿ ಸುರೇಶ್, ಜಬ್ಬೀರ್ ಸಾಹೇಬ್ ಹೇಳಿದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here