ವ್ಯಕ್ತಿ ಕಾಣೆ ಪ್ರಕರಣ ದಾಖಲು

0
117

ಹೊಸಪೇಟೆ(ವಿಜಯನಗರ)ಜು.18: ಕೂಡ್ಲಿಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕೂಡ್ಲಿಗಿ ಪಟ್ಟಣದ ವಿದ್ಯಾನಗರದ ನಿವಾಸಿಯಾದ ಕೆ.ನಟರಾಜ ಎನ್ನುವ 35ವರ್ಷದ ವ್ಯಕ್ತಿಯು ಜು.13ರಂದು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೂಡ್ಲಿಗಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯು ಕೆ.ನಟರಾಜ ವಿಡ್‍ಕಾಮ್ ಕಂಪನಿ ಎಜೆಂಟ್ ಆಗಿದ್ದು, ಬೆಂಗಳೂರಿಗೆ ತಮ್ಮ ಕಂಪನಿ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದು, ಈವರೆಗೆ ಮರಳಿ ಬಂದಿರುವುದಿಲ್ಲ. ಮೊಬೈಲ್ ಫೋನ್ ಸ್ವೀಚ್ ಆಫ್ ಆಗಿರುತ್ತದೆ. ಅಖಿಲ್, ಮಂಜುನಾಥ ಹಾಗೂ ನವೀನ್ ಎನ್ನುವವರು ನಮಗೆ ದುಡ್ಡುಕೊಡದೇ ಮೋಸಮಾಡಿದ್ದಾರೆ, ಅದ್ದರಿಂದ ಅವರನ್ನು ವಿಚಾರಣೆ ಮಾಡಬೇಕೆಂದು ಹಾಗೂ ನನ್ನ ಗಂಡನನ್ನು ಹುಡುಕಿಕೊಡಬೇಕೆಂದು ಆತನ ಪತ್ನಿಯು ದೂರಿನಲ್ಲಿ ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ ಗುರುತು: 5.6ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕಪ್ಪು ಕೂದಲು, ಕೋಲುಮುಖ ಹೊಂದಿದ್ದು, ಬಲಕಣ್ಣಿನ ಬಳಿ ಸಣ್ಣ ಕಪ್ಪು ಮಚ್ಚೆ ಇರುತ್ತದೆ.
ಕಾಣೆಯಾದ ಸಂದರ್ಭದಲ್ಲಿ ಗ್ರೇಕಲರ್ ಪ್ಯಾಂಟ್, ಪರ್ಪಲ್ ಕಲರ್ ಟೀಶರ್ಟ್ ಹಾಗೂ ಶೂ ಹಾಕಿಕೊಂಡಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಳ್ಳಿ ಪೊಲೀಸ್ ಕಂಟ್ರೋಲ್ ರೂಂ. ಸಂ: 9480805700, ಕೂಡ್ಲಿಗಿ ಡಿ.ಎಸ್.ಪಿ. ಅವರ ಕಚೇರಿಯ ದೂ.ಸಂ: 08391-220326, ಮೊ.ಸಂ:9480805721, ಕೂಡ್ಲಿಗಿ ಸಿ.ಪಿ.ಐ. ಅವರ ಕಚೇರಿಯ ದೂ.ಸಂ: 08391-220223, ಮೊ.ಸಂ: 9480805747, ಕೂಡ್ಲಿಗಿ ಪಿ.ಎಸ್.ಐ. ಅವರ ಮೊ.ಸಂ: 9480805766 ಗೆ ಸಂಪರ್ಕಿಬಹುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here