ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಿ ಎನ್. ಭರಮಣ್ಣ

0
271

ಕೊಟ್ಟೂರು: ತಾಲೂಕುದ್ಯಂತ ರೈತರ ಹೊಲಗಳಿಗೆ ಸಮರ್ಪಕ ವಿದ್ಯುತ್ ಪೂರೈಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಎನ್. ಭರಮಣ್ಣ ಹೇಳಿದರು.

ಇಲ್ಲಿನ ಕೆಬಿ ಕಚೇರಿಗೆ ಸೋಮವಾರ ಬೆಳಗ್ಗೆ 11:30ಕ್ಕೆ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಎನ್. ಭರಮಣ್ಣ ಕೆಬಿ ಇಂಜಿನಿಯರ್ ಗೈರು ಆದ ಅವರ ಅನುಪಸ್ಥಿತಿಯಲ್ಲಿ ಕ್ಲರ್ಕ್ ನಿರಂಜನ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿ ನಂತರ ಮಾತನಾಡಿದರು ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಿ ತಾಲೂಕುದ್ಯಂತ ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಸರಿಯಾದ ವಿದ್ಯುತ್ ಪೂರೈಕೆ ಆಗುತ್ತಿಲ್ಲ ವಿದ್ಯುತ್ ಪರಿವರ್ತಕಗಳು ಹಳೆಯ (TC) ದುರಸ್ತಿ ಮಾಡಿಸಿ ರೈತರ ಹೊಲಗಳಿಗೆ ವಿದ್ಯುತ್ ಪೂರೈಸಬೇಕು ಕೆ. ಆಯ್ಯನಹಳ್ಳಿ, ಚಿರಿಬಿ, ದೂಪದಹಳ್ಳಿ, ಜೋಳದ ಕೂಡ್ಲಿಗಿ, ವಿದ್ಯುತ್ ಸಮಸ್ಯೆ ಆಗುತ್ತಿದೆ. ಈಗಿರುವ ವಿದ್ಯುತ್ ಪರಿವರ್ತಕಗಳನ್ನು ಟಿಸಿ ದುರಸ್ತಿ ಮಾಡಿಸಿ ಬೇಸಿಗೆ ಬೆಳೆಗಳಿಗೆ ವಿದ್ಯುತ್ ಪೂರೈಸಿ ಇದಕ್ಕೆಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಎನ್ ಭರಮಣ್ಣ , ಎಎಸ್ಐ ಅಬ್ಬಾಸ್, ಅಂಜಿನಪ್ಪ, ನಾಗರಾಜ, ಕೃಷ್ಣಪ್ಪ, ಸಿದ್ದೇಶಿ, ಎಂ ಚಿದಾನಂದಪ್ಪ, ಇನ್ನು ಇತರರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here