ಬಳ್ಳಾರಿ/ಹೊಸಪೇಟೆ,ಫೆ.08: ಹೊಸಪೇಟೆ ತಾಲೂಕು ಕಚೇರಿಯ ವತಿಯಿಂದ ಫೆ.15ರಂದು ಶ್ರೀ ಸಂತ ಸೇವಾಲಾಲ್ ಜಯಂತಿ, ಫೆ.19ರಂದು ಸವಿತಾ ಮಹರ್ಷಿ ಜಯಂತಿ, ಛತ್ರಪತಿ ಶಿವಾಜಿ ಜಯಂತಿ, ಫೆ.20 ರಂದು ಸಂತ ಕವಿ ಸರ್ವಜ್ಞ ಜಯಂತಿ, ಮಾ.11ರಂದು ಕಾಯಕ ಶರಣರ ಜಯಂತಿಗಳ ಆಚರಣೆಯ ಪೂರ್ವಭಾವಿ ಸಭೆಯನ್ನು ಹೊಸಪೇಟೆ ತಾಲೂಕು ಕಚೇರಿಯ ಪತ್ರಿಕಾ ಭವನದಲ್ಲಿ ತಹಸೀಲ್ದಾರ್ ವಿಶ್ವನಾಥ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಕೋವಿಡ್-19ರ ನಿಯಮಗಳ ಅನ್ವಯಗಳನ್ನು ಅನುಸರಿಸಿ ಮಹನಿಯರÀ ಜಯಂತಿಗಳನ್ನು ಸರಳವಾಗಿ ಆಚರಿಸಲಾಗುವುದು, ಜಯಂತಿಯಲ್ಲಿ ಪಾಲ್ಗೊಳ್ಳುವ ಕಚೇರಿಯ ಸಿಬ್ಬಂದಿಗಳು ಹಾಗೂ ಮುಖಂಡರರುಗಳು ತಪ್ಪದೇ ಮಾಸ್ಕ್ ಅನ್ನು ಹಾಕಿಕೊಂಡಿರಬೇಕು, ಸಾಮಾಜಿಕ ಅಂತರದಿಂದ ಸರಳವಾಗಿ ಜಯಂತಿಗಳನ್ನು ಆಚರಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹೊಸಪೇಟೆ ತಾಲೂಕಿನ ಉಪತಹಶಿಲ್ದಾರರಾದ (ಗ್ರೇಡ್-2) ಮೇಘನಾ, ಮರಾಠ ಸಂಘದ ಕಾರ್ಯದರ್ಶಿಯಾದ ಈಶ್ವರ್ ಚೌವ್ಹಣ್, ಸಂತಸೇವಲಾಲ್ ಗೋರಾ ಸಮಾಜದ ಸಂಘದ ಅಧ್ಯಕ್ಷರರಾದ ರಮೇಶ್, ಸವಿತಾ ಸಮಾಜದ ಅಧ್ಯಕ್ಷರರಾದ ಸಿ.ಲಕ್ಷೀಪತಿ, ಸಂತ ಕವಿ ಸರ್ವಜ್ಞ ಸಮಾಜದ ಅಧ್ಯಕ್ಷರರಾದ ಹುಲುಗಪ್ಪ ಹಾಗೂ ಇನ್ನಿತರ ಮುಖಂಡರರು ಇದ್ದರು.