ಗಂಗಾವತಿ ಅಭಿವೃದ್ಧಿಗಾಗಿ ಜೆಡಿಎಸ್ ಗೆಲ್ಲಿಸಿ: ಎಚ್ ಆರ್ ಚನ್ನಕೇಶವ

0
47

ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಇರುವಾಗಲೇ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ ಅದರಂತೆ ಜೆಡಿಎಸ್ ಅಭ್ಯರ್ಥಿ ಎಚ್ ಆರ್ ಚನ್ನಕೇಶವ ಮತ್ತು ಜೆಡಿಎಸ್ ತಾಲೂಕಾಧ್ಯಕ್ಷರಾದ ಶೇಖ್ ನಬಿಸಾಬ್ ಇವರ ನೇತೃತ್ವದಲ್ಲಿ ಗಂಗಾವತಿ ನಗರದ 33,34 ಮತ್ತು 35 ನೇ ವಾರ್ಡ್ ಗಳಲ್ಲಿ ಸಮ್ಮುಖದಲ್ಲಿ ಬಿರುಸಿನ ಚುನಾವಣೆ ಪ್ರಚಾರ ನಿಮಿತ್ಯ ಮತಯಾಚನೆ ಮಾಡಿದರು. ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಆಶೀರ್ವದಿಸಿ, ನನಗೊಂದು ಅವಕಾಶ ನೀಡಿಬೇಕೆoದು ಮನವಿ ಮಾಡಲಾಯಿತು.

ಈ ಹಿಂದೆ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ, ರಾಜ್ಯದ ರೈತರ 25,000 ಕೋಟಿ ಸಾಲ ಮನ್ನ ಮಾಡಿದ್ದರು. ಜೊತೆಗೆ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಕೋಟಿಗಳ ಅನುದಾನವನ್ನು ತಂದು ಗಂಗಾವತಿ ನಗರವನ್ನು ಸುಂದರ ನಗರವನ್ನಾಗಿ ಮಾಡಿದ್ದಾರೆ, ಗಂಗಾವತಿ ನಗರದ ಪ್ರತಿ ವಾರ್ಡ್ಗಳಲ್ಲಿ ಮತ್ತು ಗಂಗಾವತಿ ನಗರದ ಪ್ರಮುಖ ರಸ್ತೆಗಳು, ಮಿನಿವಿಧಾನಸೌಧ, ಬಸ್ ನಿಲ್ದಾಣ, ಪಾರ್ಕ್ ಹೀಗೆ ಅನೇಕ ಅಭಿವೃದ್ಧಿಗಳು ಗಂಗಾವತಿ ನಗರದಲ್ಲಿ ಆಗಲು ಮಾನ್ಯ ಕುಮಾರಸ್ವಾಮಿಯವರೇ ಕಾರಣರಾಗಿದ್ದು, ಹಾಗಾಗಿ ಮತ್ತೊಮ್ಮೆ ಮೊಗದಮ್ಮೆ ಕುಮಾರಸ್ವಾಮಿಯವರ ಪಂಚ ರತ್ನ ಯೋಜನೆಗಳನ್ನು ಜಾರಿಗೆ ತರಲು ಮತದಾರರು ಈ ಬಾರಿ ಜೆಡಿಎಸ್ ಅನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಈಗಾಗಲೇ ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಕಾಂಗ್ರೆಸ್ ನ ಇಕ್ಬಾಲ್ ಅನ್ಸಾರಿಯನ್ನು ಎರಡೆರಡು ಬಾರಿ ಗೆಲ್ಲಿಸಿ ಅವರ ಅಧಿಕಾರವನ್ನು ನೀವೆಲ್ಲ ಈಗ ನೋಡಿದ್ದೀರಿ, ಹಾಗಾಗಿ ಜೆಡಿಎಸ್ ಪಕ್ಷ ದಿಂದ ಸ್ಪರ್ಧಿಸಿರುವ ನನಗೆ ಒಮ್ಮೆ ಅವಕಾಶ ನೀಡಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯಲು ನನ್ನನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ವಿನಂತಿಸಿದರು. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಬೇಸತ್ತ ಅನೇಕ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ಸಂಧರ್ಭದಲ್ಲಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳು, ವಿವಿಧ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here