ಒಂದು ಅವಕಾಶ ನಮಗೆ ಕೊಡಿ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ.

0
132

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಸೂರ್ಯ ನಾಯಕನ ತಾಂಡಕ್ಕೆ ಭೇಟಿ ನೀಡಿ ಮತದಾರರಲ್ಲಿ ಮತಯಾಚನೆ ಮಾಡಿದರು, ಮತದಾರರ ಉದ್ದೇಶಿಸಿ ಮಾತನಾಡಿದ ಶರಣಪ್ಪ ಸಜ್ಜೀವಲ ಅವರು ಈ ಚುನಾವಣೆ ನಮ್ಮ ಮಕ್ಕಳ ಮುಂದಿನ ಭವಿಷ್ಯದ ಚುನಾವಣೆಯಾಗಿದೆ, ಎಲ್ಲಾ ಪಕ್ಷಗಳು ನಮ್ಮ ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಿವೆ, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಅವು ವಿಫಲವಾಗಿವೆ, ನಮಗೆ ಉತ್ತಮ ಆರಂಭ, ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ವಿಫಲವಾಗಿದೆ, ನಮ್ಮ ಮಕ್ಕಳ ಭವಿಷ್ಯವನ್ನು ನೆನಪಿನಲ್ಲಿಟ್ಟುಕೊಂಡು ಈ ಬಾರಿ ತಾವೆಲ್ಲರೂ ಆಮ್ ಆದ್ಮಿ ಪಕ್ಷಕ್ಕೆ ಮತ ಚಲಾಯಿಸಬೇಕೆಂದು ವಿನಂತಿ ಮಾಡಿದರು.

ಬಿಜೆಪಿ ಸರ್ಕಾರವು 40% ಸರ್ಕಾರ ಎಂದು ಕುಖ್ಯಾತಿಯನ್ನು ಪಡೆದು, ಮತದಾನ ಮಾಡಿ ಗೆಲ್ಲಿಸಿದ ಎಲ್ಲಾ ಮತದಾರರಿಗೆ ಅವಮಾನ ಮಾಡಿದೆ ಮತ್ತು ಅವರನ್ನು ವಂಚಿಸಿದೆ, ಪ್ರತಿಭಾವಂತ ನಮ್ಮ ಮಕ್ಕಳು ಸರ್ಕಾರಿ ನೌಕರಿ ಗಾಗಿ 50 ಲಕ್ಷದಿಂದ 80 ಲಕ್ಷ ಲಂಚ ಕೊಡಬೇಕಾದ ಭ್ರಷ್ಟಾಚಾರದ ಕೋಪವನ್ನು ಅವರು ತಯಾರು ಮಾಡಿದ್ದಾರೆ, ಇಂತಹ ಸರ್ಕಾರಗಳು ಬಂದರೆ ಬಡವರ ಮಕ್ಕಳು ಎಂದಾದರೂ ಸರ್ಕಾರಿ ನೌಕರಿಯನ್ನು ಹಿಡಿಯಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. ಈ ಭ್ರಷ್ಟಾಚಾರದ ಸರ್ಕಾರವನ್ನು ಕಿತ್ತೊಯ್ಯುಗೆಯುವ ಸಮಯ ಈಗ ನಿಮಗೆ ಬಂದಿದೆ, ಅದನ್ನು ನೀವು ಸರಿಯಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು. ಕಾಂಗ್ರೆಸ್ನವರು ಸುಳ್ಳು ಭರವಸೆಗಳ ಆಧಾರದ ಮೇಲೆ ಚುನಾವಣೆಯನ್ನು ಎದುರಿಸುತ್ತಿದ್ದು, ತಾವು ಈಗ ಅಧಿಕಾರದಲ್ಲಿರುವ ಯಾವುದೇ ರಾಜ್ಯದಲ್ಲಿ ತರದೆ ಇದ್ದಂತ ಯೋಜನೆಗಳನ್ನು ಈಗ ಘೋಷಣೆ ಮಾಡಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಮೋಸದ ಮಾತುಗಳಿಗೆ ನೀವು ಬಲಿಯಾಗಬೇಡಿ, ಕಾಂಗ್ರೆಸ್ ನವರಗೆ ಅಧಿಕಾರದಲ್ಲಿ ಇರುವಂತಹ ರಾಜ್ಯದಲ್ಲಿ ಯೋಜನೆಗಳನ್ನ ಜಾರಿ ಮಾಡುವ ಮನಸ್ಸಿಲ್ಲ, ಆದರೆ ಅಧಿಕಾರಕ್ಕಾಗಿ ಸುಳ್ಳು ಭರವಸೆ ನೀಡಿ ನಮ್ಮನ್ನು ವಂಚಿಸುತ್ತಿದ್ದಾರೆ.ಕಾಂಗ್ರೆಸ್ ನವರೇ ನಿಮಗೆ ನಿಜವಾಗಿಯೂ ಬಡವರ ಬಗ್ಗೆ ಕಾಳಜಿ ಇದ್ದಲ್ಲಿ ನೀವು ಈಗ ಅಧಿಕಾರ ನಡೆಸುತ್ತಿರುವ ರಾಜ್ಯಗಳಲ್ಲಿ ಯಾಕೆ ಘೋಷಣೆ ಮಾಡಿರುವ ಯೋಜನೆಗಳನ್ನು ಜಾರಿ ಮಾಡಿಲ್ಲ, ಇದಕ್ಕೆ ನೀವು ಉತ್ತರ ಹೇಳಲೇಬೇಕೆಂದು ಪ್ರಶ್ನಿಸಿದರು. ಆದ್ದರಿಂದ ತಾವೆಲ್ಲರೂ ಪ್ರಾಮಾಣಿಕವಾಗಿ ಜನರಿಗೆ ನೀಡಿದ ಮಾತನ್ನು ನೆರವೇರಿಸಿದ ಆಮ್ ಆದ್ಮಿ ಪಕ್ಷದ ಪೊರಕೆ ಗುರುತಿಗೆ ಮತ ಚಲಾಯಿಸಬೇಕೆಂದು ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ರಾಘವೇಂದ್ರ ಸಿದ್ದಿಕೇರಿ, ರೇಣುಕಾ, ಬಸವರಾಜ್, ಪರಶುರಾಮ್ ಒಡೆಯರ್, ಹನುಮೇಶ್ ಬೋವಿ, ಜ್ಯೋತಿ ಲಕ್ಷ್ಮಿ, ವಿರುಪಣ್ಣ, ದಾಕ್ಷಾಯಿಣಿ, ಚಂದ್ರಶೇಖರ್ ವಗ್ಗ ಹಾಗೂ ಕಾರ್ಯಕರ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here