ಕೊಟ್ಟೂರು ಹಗರಿ ಬೊಮ್ಮನಹಳ್ಳಿ ಕ್ಷೇತ್ರ 8278 ಮತಗಳಿಂದ ಜಯಭೇರಿ ಬಾರಿಸಿದ ಜೆಡಿಎಸ್ ಅಭ್ಯರ್ಥಿ ನೇಮಿರಾಜ್ ನಾಯ್ಕ್ ಅವರ ಆಪ್ತರು ,ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟ್ಟಣದ ಆರಾಧ್ಯ ದೇವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಪಾದ ವೃಂದಕ್ಕೆ 501 ತೆಂಗಿನಕಾಯಿ ಹೊಡೆದು ಸಂಭ್ರಮಿಸಿದರು.
ಕೊಟ್ಟೂರಿನ ಹುಲಿ ಎಂ ಎಂ ಜೆ ಹರ್ಷವರ್ಧನ್ ಯಾರ ಜೊತೆಯಲ್ಲಿ ಇರುತ್ತಾರೋ ಅವರು ಗೆಲುವು ನಿಶ್ಚಿತ ಎಂದು ಜನರು ಮಾತನಾಡುವುದರ ಮುಖಾಂತರ ಇವರು ಇಲ್ಲಿಯ ಜನರ ಜೊತೆಯಲ್ಲಿ ಅಭೂತಪೂರ್ವ ಜಯದ ಸಂಭ್ರಮ ಆಚರಿಸಿದರು .