ಸಂಡೂರು: ನ: 22: ತಾಲೂಕಿನ ತೋರಣಗಲ್ಲು ಗ್ರಾಮದ ನಾಲ್ಕನೇ ವಾರ್ಡಿನಲ್ಲಿ ಗುಂಪು ಸಭೆಗಳ ಮೂಲಕ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಇದೇ ನವಂಬರ್ 21 ರಿಂದ ಡಿಸೆಂಬರ್ 4 ರ ವರೆಗೆ ಆಚರಿಸಲಾಗುವ ನೋ-ಸ್ಕಾಲ್ ಪೆಲ್ ವ್ಯಾಸೆಕ್ಟೆಮಿ ಪಾಕ್ಷಿಕ (ಎನ್.ಎಸ್.ವಿ) ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ವಿಧಾನವು ಅತ್ಯಂತ ಸರಳ ಮತ್ತು ಸುಲಭ, ಯಾವುದೇ ಗಾಯವಿಲ್ಲ, ಹೊಲಿಗೆ ಇಲ್ಲ, ಕೇವಲ ಹತ್ತು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ, ತಕ್ಷಣ ಮನೆಗೆ ಹೋಗ ಬಹುದು, ಶಸ್ತ್ರಚಿಕಿತ್ಸೆಯಿಂದ ಪುರುತ್ವಕ್ಕೆ ಯಾವುದೇ ದಕ್ಕೆ ಇರುವುದಿಲ್ಲ, ಶಸ್ತ್ರಚಿಕಿತ್ಸೆ ನಂತರ ಸಾಧಾರಣವಾಗಿ ಎಲ್ಲ ಕೆಲಸಗಳನ್ನು ಮಾಡಬಹುದು, ಲೈಂಗಿಕ ಸಂಪರ್ಕ ಮಾಡುವಾಗ ಮೂರು ತಿಂಗಳು ಕಡ್ಡಾಯವಾಗಿ ನಿರೋಧ್ (ಕಾಂಡೋಮ್) ಬಳಸಬೇಕು, ವಿರ್ಯಾಣುಗಳು ವೀರ್ಯ ಕೋಶದಲ್ಲಿ ಉಳಿದಿರಬಹುದು ಅದಕ್ಕಾಗಿ ಕಾಂಡೋಮ್ ಬಳಸಬೇಕು, ಕಾಂಡೋಮ್ ಉಚಿತವಾಗಿ ದೊರೆಯಲಿವೆ, ಹಾಗೂ ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡವರಿಗೆ ರೂ. 1,100 ಗಳನ್ನು ಪ್ರೋತ್ಸಾಹ ಧನವಾಗಿ ಸರ್ಕಾರ ನೀಡಲಿದೆ ಎಂದು ತಿಳಿಸಿದರು,
ಡಿಸೆಂಬರ್ 4ರ ವರೆಗೆ ಜಾಗೃತಿಯನ್ನು ಮೂಡಿಸಿ ಫಲಾನುಭವಿಗಳನ್ನು ಪತ್ತೆ ಹಚ್ಚಿ ಎನ್.ಎಸ್.ವಿ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಿ, ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು, ಮಹಿಳೆಯರ ಶಸ್ತ್ರಚಿಕಿತ್ಸೆಗಿಂತ ಸರಳ ಇರುವ ಈ ವಿಧಾನವನ್ನು ಪತಿ ಅಳವಡಿಸಿಕೊಂಡಲ್ಲಿ ಮಹಿಳೆಯರ ಹೆಚ್ಚುಶ್ರಮ ಕೊಡುವುದನ್ನು ತಪ್ಪಿಸ ಬಹುದು, ಅಲ್ಲದೇ ಪತ್ನಿಗೆ ಬೊಜ್ಜು, ಪದೇ ಪದೇ ಹೆರಿಗೆ ತೊಂದರೆಗಳು ಇದ್ದಲ್ಲಿ ಪತಿಯೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕುಟುಂಬ ನಿಯಂತ್ರಣ ಮಾಡ ಬಹುದು, ಕುಟುಂಬ ನಿಯಂತ್ರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ, ಅಂದಾಜು 142 ಕೋಟಿ ಜನಸಂಖ್ಯೆಯನ್ನು ಹೊಂದಿದ್ದೇವೆ,ಸಂಖ್ಯೆ ಏರುತ್ತಲೇ ಇದೆ, ಜನ ಸಂಖ್ಯೆ ನಿಯಂತ್ರಣದಿಂದ ದೇಶದ ಅಭಿವೃದ್ಧಿ ಎಂಬುದನ್ನು ಅರಿಯೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತೋರಣಗಲ್ ಜಂಬಯ್ಯ, ವೀರೇಶ್, ಬೆನ್ನೇಟಿ ನಾಗಪ್ಪ,ರಮೇಶ್, ಗಾದಿಲಿಂಗಪ್ಪ,ಕಾಡಪ್ಪ,ಬಸವರಾಜ್, ಸಂಜಯ್ರಾಯ್,ಅರ್ಷಾದ್,ಇಮ್ರಾನ್,ಬಸಯ್ಯ,ಇತರರು ಹಾಜರಿದ್ದರು