ಕರ್ನಾಟಕ ರಿಪಬ್ಲಿಕನ್ ಸೇನಾ ಸಂಡೂರು ತಾಲೂಕು ಪದಾಧಿಕಾರಿಗಳ ಆಯ್ಕೆ

0
107

ಸಂಡೂರು:ಜ:24:-ತಾಲೂಕು ಕ್ರೀಡಾ ಮೈದಾನದಲ್ಲಿ “ಕರ್ನಾಟಕ ರಿಪಬ್ಲಿಕನ್ ಸೇನಾ”ಬಳ್ಳಾರಿ ಜಿಲ್ಲಾ ಸಮಿತಿಯಿಂದ ತಾಲೂಕು ಸಮಿತಿ ನಿರ್ಮಾಣ ಪ್ರಕ್ರಿಯೆ ಜರುಗಿತು. ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಹೊನ್ನೆಳಪ್ಪ ಮತ್ತು ವಿಜಯನಗರ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ್ ಸುಗ್ಗೆನಹಳ್ಳಿ, ಉಭಯ ಜಿಲ್ಲೆಗಳ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರು-ಶ್ರೀ ಕಿರು ನಾಯಕ್(ಸುಶಿಲಾನಗರ) ಉಪಾಧ್ಯಕ್ಷರು-ರಮೇಶ್(ಸಂಡೂರು) ಮತ್ತು ಕೆಎಂ. ಶಶಿಧರ್(ವಡ್ಡು)
ಪ್ರದಾನ ಕಾರ್ಯದರ್ಶಿ-ಇಂಗಳಗಿ ಅಜ್ಜಪ್ಪ (ವಡ್ಡು) ಕಾರ್ಯದರ್ಶಿ-ಕೆ.ವಿ.ಬಸವರಾಜ್, ಖಜಾಂಚಿ-ಬೆಣಕಲ್ ಹುಲಗಪ್ಪ, ಹಾಗೂ ಕಾರ್ಯಕರ್ತರಾಗಿ ಹೊನ್ನೆಶಿ,ಅಂಜನೆಯಲು, ನಾಗರಾಜ, ಸುಂಕಯ್ಯ, ಸಂಡೂರು ಇವರುಗಳನ್ನು ಜಿಲ್ಲಾಧ್ಯಕ್ಷರಾದ ಹೊನ್ನೆಳಪ್ಪ ಅಧಿಕೃತವಾಗಿ ಆಯ್ಕೆ ಮಾಡಿದರು.

ಈ ಸಂಧರ್ಭದಲ್ಲಿ ಸಭೆಯನ್ನುದ್ದೇಶಿಸಿ ವಿಜಯನಗರ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ್ ಸುಗ್ಗೆನಹಳ್ಳಿ ಅವರು ಮಾತನಾಡುತ್ತ “ಕರ್ನಾಟಕ ರಿಪಬ್ಲಿಕನ್ ಸೇನಾ” ಡಾ.ಬಿ.ಆರ್.ಅಂಬೇಡ್ಕರ್ ರವರ ಸಾರಥ್ಯದಲ್ಲಿ ದೇಶದ ಎಲ್ಲಾ ರಾಜ್ಯದಲ್ಲೂ ಈಗಾಗಲೇ ಅಸ್ತಿತ್ವದಲ್ಲಿದೆ,ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕದಲ್ಲಿ ಕೂಡ ಮಾನ್ಯ ಜಿಗಣಿ ಶಂಕರ್ ಅವರ ನೇತೃತ್ವದಲ್ಲಿ ಕರ್ನಾಟಕ ರಿಪಬ್ಲಿಕನ್ ಸೇನಾ ಅಸ್ತಿತ್ವದಲ್ಲಿದೆ, ಈಗಾಗಲೇ ಅನೇಕ ಜಿಲ್ಲೆಯಲ್ಲಿ ಕೂಡ ಸ್ಥಾಪನೆಗೊಂಡಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಕ್ಕೆ ಹಾಗೂ ಸಂವಿಧಾನ ಸಿದ್ದಾಂತಕ್ಕನುಗುಣವಾಗಿ,ಉತ್ತಮ ಸಮಾಜಕ್ಕಾಗಿ ಕಾರ್ಯನಿರ್ವಹಿಸುತ್ತಿದೇ.

ಇದು ರಾಷ್ಟ್ರಮಟ್ಟದ ಸಂಘಟನೆಯಾಗಿದ್ದು ಮುಂಬರುವ ದಿನಗಳಲ್ಲಿ ರಾಜಕೀಯವಾಗಿ ಬೆಳೆಯಲು ಪಕ್ಷವಾಗಿ ಪರಿವರ್ತನೆಗೊಳಿಸಿ ಎಲ್ಲಾ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ನುಡಿದರು.ನಂತರ ಜಿಲ್ಲಾಧ್ಯಕ್ಷರಾದ ಶ್ರೀ ಹೊನ್ನೆಳಪ್ಪ ನವರು ಮಾತನಾಡುತ್ತಾ… ಎಲ್ಲಾ ಕಾರ್ಯಕರ್ತರು ನಿಷ್ಠೆಯಿಂದ ಕಾರ್ಯನಿರ್ವಹಿಸಲು ಸೂಚಿಸಿದರು,ನಂತರ ನೂತನ ಅಧ್ಯಕ್ಷ ಶ್ರೀ ಕಿರು ನಾಯಕ್ ಮಾತನಾಡುತ್ತ.. ಈ ಅವಕಾಶ ಕಲ್ಪಿಸಿಕೊಟ್ಟ ಜಿಲ್ಲಾ ಪದಾಧಿಕಾರಿಗಳಿಗೂ ಅಭಿನಂದಿಸುತ್ತ ಕೊಟ್ಟಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹುಸುತ್ತೇನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here