ಹಿರಿಯ ನಾಗರೀಕರ ಶ್ರಮ ಎಂದಿಗೂ ಮರೆಯಬಾರದು, ಅವರನ್ನು ಗೌವರಯುತವಾಗಿ ಕಾಣಬೇಕು, ಅವರ ಜ್ಞಾನ ಮತ್ತು ಅನುಭವವನ್ನು ಯವಕರು ಬಳಸಿಕೊಳ್ಳಬೇಕು: ಡಾ.ಗೋಪಾಲ್ ರಾವ್.

0
205

ಸಂಡೂರು: ಅ: 01: ತಾಲೂಕಿನ ‌ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಅವರು ಅರವತ್ತು ವರ್ಷ ದಾಟಿದ ಹಿರಿಯ ನಾಗರೀಕರ ಆರೋಗ್ಯ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ, ಆರು ತಿಂಗಳಿಗೊಮ್ಮೆ ಅವರನ್ನು ಆಸ್ಪತ್ರೆಗೆ ಕರೆತಂದು ಕಣ್ಣುಗಳ ಪರೀಕ್ಷೆ, ರಕ್ತದೊತ್ತಡ, ಸುಗರ್ ಲೆವೆಲ್ ಎಷ್ಟಿದೆ ಎಂಬ ಸಾಮಾನ್ಯ ಪರೀಕ್ಷೆ ಮಾಡಿಸಬೇಕು ಹಾಗೆ ಉತ್ತಮ ಆಹಾರ ಕೊಡುವುದು ಸಹಾ ಅಷ್ಟೇ ಮುಖ್ಯ, ವಿಟಮಿನ್, ಖನಿಜಾಂಶಗಳ ಯುಕ್ತ ಆಹಾರ, ಹಾಲು, ಹಣ್ಣು ಕೊಡುವುದು ಮುಖ್ಯವಾಗಿದೆ, ಕ್ಯಾಲ್ಸಿಯಂ ಮಾತ್ರೆಗಳನ್ನು ವೈದ್ಯರ ಸಲಹೆಯಂತೆ ನಿಯಮಿತವಾಗಿ ಕೊಡ ಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಮುಖ್ಯವಾಗಿ ಹಿರಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯಬೇಕು, ವೃದ್ಧಾಪ್ಯದಲ್ಲಿ ಹಣದ ಅವಶ್ಯಕತೆ ಇರುವುದೆಂದು ಸ್ವಲ್ಪ ಹಣ ಕೂಡಿಟ್ಟಿದ್ದನ್ನು ಹೊಡೆದು, ಬಡೆದು ಕಿತ್ತುಕೊಂಡವರ ಸುದ್ದಿಯನ್ನು ಕೇಳಿದ್ದೇವೆ, ಆಸ್ತಿಗಾಗಿ, ಆರೈಕೆಗಾಗಿ ಹಲ್ಲೆಗಳು ನಡೆದ ಸುದ್ಧಿ ಕೇಳಿ ಬೇಸರ ತರಿಸುತ್ತವೆ, ಅದಕ್ಕಾಗಿ ಸರ್ಕಾರ ಕಾನೂನು ಜಾರಿಮಾಡಿದೆ, ಶಿಕ್ಷೆ ಮತ್ತು ದಂಡವನ್ನು ವಿಧಿಸುತ್ತದೆ ಎಂಬುದನ್ನು ಅರಿಯ ಬೇಕು, ರಾಜ್ಯ ಮಟ್ಟದ 1090 ಸಹಾಯ ವಾಣಿ, ರಾಷ್ಟ್ರ ಮಟ್ಟದ 14567 ಸಹಾಯವಾಣಿಗೆ ಕರೆ ಮಾಡಿ ರಕ್ಷಣೆ ಪಡೆಯುವ ಅವಕಾಶವೂ ಹಿರಿಯ ನಾಗರೀಕರಿಗೆ ಇದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಹಿರಿಯ ನಾಗರೀಕರ ಆರೈಕೆ ಮಾಡುವುದು ಮಹಾ ಭಾಗ್ಯ ಎಂದು ತಿಳಿಯಬೇಕು, ವೃದ್ಧಾಪ್ಯ ವೇತನ ಸಂಪೂರ್ಣ ಅವರಿಗೆ ಬಳಕೆಗೆ ನೋಡಿಕೊಳ್ಳಬೇಕು, ಎಲ್ಲಾ ಹಿರಿಯ ನಾಗರೀಕರು ಸೇವಾಸಿಂಧು ಮೂಲಕ ಗುರುತಿನ ಚೀಟಿ,ಅಭಾ ಕಾರ್ಡ ಸಹ ಪಡೆಯಬೇಕು,ಹಾಗೆ ರಿಯಾಯಿತಿ ಬಸ್ ಪಾಸ್ ಸೌಲಭ್ಯ ಪಡೆಯ ಬೇಕು, ಬಸ್ಸುಗಳಲ್ಲಿ ಆಸನಗಳನ್ನು ಅವರಿಗೆ ಬಿಟ್ಟುಕೊಡಬೇಕು, ಮತ್ತು ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಪ್ರೀತಿಯ ಮಾತುಗಳಿಂದ ಅವರನ್ನು ನೋಡಿಕೊಂಡರೆ ಸಾಕು ಹಿರಿಯರು ಸಂತೋಷದಿಂದ ಇರುವರು, ಯಾರು ಸಂಬಂಧಿಕರು ಇಲ್ಲದೇ ಇದ್ದರೆ ಸರ್ಕಾರದ ಮತ್ತು ಅನುದಾನಿತ ವೃದ್ಧಾಶ್ರಗಳನ್ನು ಅವಲಂಭಿಸ ಬೇಕಾಗಬಹುದು,ಎಲ್ಲರಿದ್ದು, ಹಣ ಇದ್ದು ವೃದ್ಧಾಶ್ರಮಕ್ಕೆ ಕಳಿಸುವ ದುರ್ಘತಿ ಯಾರಿಗೂ ಬರಬಾರದು ಎಂದು ತಿಳಿಸಿದರು, ನಂತರ ವಿಶೇಷವಾಗಿ ಹಿರಿಯ ನಾಗರೀಕರ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು,

ಈ ಸಂದರ್ಭದಲ್ಲಿ ಹಿರಿಯ ನಾಗರೀಕರಾದ ಜಿ.ಎಮ್ ರುದ್ರಮುನಿ,ನಾಗರಾಜ್, ಸರೋಜಾ,ಪಾತಿಮಾ,ಮಸ್ತಾನ್ ಸಾಬ್, ಮಕ್ಕಳ ತಜ್ಞ ಡಾ.ಮಣಿಕುಮಾರ್, ಹರ್ಷ,ಮಂಜುನಾಥ್,ಶಕೀಲ್ಅಹಮದ್,ಶ್ರೀರಾಮ್,ವಂಕಪ್ಪ,ಇಮ್ರಾನ್,ರೋಜಾ,ನರೇಶ್ ಕುಮಾರ್,ಮಹಾಂತೇಶ್, ಚಂದ್ರಶೇಖರ,ರಾಜೇಶ್, ಹುಲಿಗೆಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here