ಮಸ್ಕಿ .̺ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆರಂಭಿಸಿರುವ ಪ್ರತಿ ರವಿವಾರದ ಸಂಡೇ ಫಾರ್ ಸೋಶಿಯಲ್ ವರ್ಕ್ ಸೇವ ಕಾರ್ಯವನ್ನು ಪರಾಪುರ ರಸ್ತೆಯ ಬದಿಗಳಲ್ಲಿ 154ನೇ ಸಂಡೇ ಫಾರ್ ಸೋಶಿಯಲ್ ವರ್ಕ್ ಸೇವ ಕಾರ್ಯದ ನಿಮಿತ್ತವಾಗಿ ಸಸಿಗಳನ್ನು ಹಚ್ಚಲಾಯಿತು.
ಅಭಿನಂದನ್ ಸ್ಪೂರ್ತಿ ಧಾಮ ವಿಕಲಚೇತನ ಅನಾಥ ಹಾಗೂ ಬಡ ಮಕ್ಕಳಿಂದ ಪರಿಸರ ಸಂರಕ್ಷಣೆಗಾಗಿ ಒಂದು ಹೆಜ್ಜೆಯನ್ನು ಇಟ್ಟಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಆಧುನಿಕ ಜೀವನ ಪದ್ಧತಿಯಲ್ಲಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವೆಂದು ಪರಿಸರ ಸಂರಕ್ಷಣೆ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಘೋಷ ವಾಕ್ಯಗಳೊಂದಿಗೆ ಸಸ್ಯಗಳನ್ನು ಹಚ್ಚಲಾಯಿತು.
ಈ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಜಾಫರಮಿಯಾ ಮಂಜುನಾಥ್ ಜೋಗಿನ್ ಮಲ್ಲಿಕಾರ್ಜುನ್ ಬಡಿಗೇರ್ ಕಾರ್ತಿಕ್ ಜೋಗಿನ್ ಕಿಶೋರ್ ಹಾಗೂ ಸ್ಪೂರ್ತಿಧಾಮದ ಮಕ್ಕಳು ಉಪಸ್ಥಿತರಿದ್ದರು