ಜಂತು ಹುಳುವಿನ ಬಾಧೆ ತಪ್ಪಿಸಲು ಆಲ್ಬೆಂಡಜೋಲ್ ಮಾತ್ರೆ ವಿತರಣೆ ಮಾಡುತ್ತಿರುವುದು ಉತ್ತಮ ಕಾರ್ಯ: ಕುರೇಕುಪ್ಪ ಪುರಸಭೆ ಸದಸ್ಯ ರಾಮಕೃಷ್ಣ,

0
820

ಸಂಡೂರು:ಆಗಸ್ಟ್:10:-ತೋರಣಗಲ್ಲು ರೈಲ್ವೆ ನಿಲ್ದಾಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳು ಸ್ವಚ್ಚತೆಗೆ ಹೆಚ್ಚು ಮಹತ್ವ ಕೊಡಬೇಕು, ಉತ್ತಮ ಆಹಾರ ಸೇವನೆ ಮಾಡಬೇಕು, ಮತ್ತು ಇಂತಹ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳ ಬೇಕು, ಮಾತ್ರೆಗಳನ್ನು ಹಾಕಿಕೊಂಡು ಉಗಳಬಾರದು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು,
ನಾನೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ ಎಂದು ಅವರು ಸಂತಸ ಹಂಚಿಕೊಂಡರು,

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ತಿಂಗಳು 10 ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವೆಂದು, ಮತ್ತು 17 ರಂದು ಜಂತುಹುಳು ನಿರ್ಮೂಲನಾ ದಿನವೆಂದು ಆಚರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ಆಲ್ಬೆಂಡಜೋಲ್ ಮಾತ್ರೆ ವಿತರಣೆ ಮಾಡಲಾಗುತ್ತದೆ, ಮಾತ್ರೆಯನ್ನು ಚೀಪ ಬೇಕು, ನುಂಗಬಾರದು, ಮಕ್ಕಳಲ್ಲಿ ರಕ್ತಹೀನತೆ ಮತ್ತು ದೇಹ ಬೆಳವಣಿಗೆಗೆ ಅಪಾಯ ತಂದೊಡ್ಡುವ ಲಾಡಿಹುಳು, ಕೊಕ್ಕೆಹುಳು ಮತ್ತು ಜಂತುಹುಳುಗಳ ಬಾಧೆ ತಪ್ಪಿಸಲು ಪ್ರತಿ ಅರು ತಿಂಗಳಿಗೊಮ್ಮೆ ಆಲ್ಬೆಂಡೋಜೋಲ್ ಮಾತ್ರೆಯನ್ನು ನೀಡಲಾಗುತ್ತದೆ, ಈ ಮಾತ್ರೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲಿದೆ, ಕಡ್ಡಾಯವಾಗಿ ಮಾತ್ರೆ ಸೇವನೆ ಮಾಡುವುದು ಸರಿಯಾದ ಕ್ರಮ, ಹುಳುಗಳ ಬಾಧೆ ತಪ್ಪಿಸಲು ಶೌಚಾಲಯಕ್ಕೆ ಹೋಗಿ ಬಂದ ನಂತರ, ಊಟಕ್ಕೆ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆಯುವುದು, ತರಕಾರಿಗಳನ್ನು ಸ್ವಚ್ಛವಾಗಿ ಒಳ್ಳೆಯ ನೀರಿನಿಂದ ತೊಳೆಯುವುದು, ಆಹಾರ ಪದಾರ್ಥಗಳನ್ನು ಮುಚ್ಚಿಡುವುದು, ಮನೆಯ ಸುತ್ತ ಮುತ್ತ ಸ್ವಚ್ಛವಾಗಿಡುವುದು, ಕಾಲಿಗೆ ಚಪ್ಪಲಿ ಬಳಸುವುದು, ಉಗುರುಗಳನ್ನು ಸರಿಯಾದ ಕ್ರಮದಲ್ಲಿ ಇಡುವುದು ಮಾಡಿದಲ್ಲಿ ಹುಳಗಳ ಬಾಧೆ ತಪ್ಪಿಸಲು ಸಾಧ್ಯವಿದೆ, ಏಕ ಕಾಲದಲ್ಲಿ ಎಲ್ಲರೂ ಮಾತ್ರೆ ಸೇವನೆ ಮಾಡಿದಲ್ಲಿ ಹುಳಗಳು ನಾಶ ವಾಗುತ್ತವೆ ಎನ್ನುವ ಕಾರಣಕ್ಕೆ ಮಾತ್ರೆಗಳನ್ನು ವರ್ಷಕ್ಕೆ ಎರಡು ಬಾರಿ ನೀಡಲಾಗುವುದು ಎಂದು ತಿಳಿಸಿದರು,
ಇಂದಿನಿಂದ ಶಾಲೆ, ಕಾಲೇಜು, ಅಂಗನವಾಡಿಗಳಲ್ಲಿ ಮಾತ್ರೆ ವಿತರಣೆ ಕಾರ್ಯ ಎಂದು ತಿಳಿಸಿದರು,

ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಎಸ್.ನಾರಾಯಣ ಅವರ ಅನುಪಸ್ಥಿತಿಯಲ್ಲಿ ಶಾಲೆಯ ಮುಖ್ಯ ಗುರುಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಆರ್.ಕೆ ಎಸ್.ಕೆ ಕೌನ್ಸಿಲರ್ ಪ್ರಶಾಂತ್ ಸ್ವಾಗತ ಕೋರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು,
ಮುಖ್ಯ ಗುರುಗಳಾದ ಎಸ್.ಎನ್ ಬಾಬು ಮಾತನಾಡಿ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳ ಮೂಲಕ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತದೆ ಇದು ಸಹ ಅತ್ಯುತ್ತಮ ಕಾರ್ಯಕ್ರಮ ಮಕ್ಕಳ ಆರೋಗ್ಯದ ಬಗ್ಗೆ ಇಲಾಖೆ ಕೈಗೊಂಡಿರುವ ಕಾರ್ಯಕ್ರಮಗಳು ಉಪಯುಕ್ತವಾಗಿವೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕುರೇಕುಪ್ಪ ಪುರಸಭೆಯ ಸದಸ್ಯರಾದ ಶ್ರೀ ರಾಮಕೃಷ್ಣ, ಶಾಲೆಯ ಮುಖ್ಯ ಗುರುಗಳಾದ ಎಸ್.ಎನ್ ಬಾಬು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರ್.ಕೆ.ಎಸ್.ಕೆ ಕೌನ್ಸಿಲರ್ ಪ್ರಶಾಂತ್, ಸಹ ಶಿಕ್ಷಕರಾದ ಬಂದೇ ನವಾಜ್,ಶಶಿಕಲಾ,ಅಂಬಿಕಾ, ಗ್ರಾಮದ ಮುಖಂಡರಾದ ಗಣೇಶ್,ಶ್ರೀನಿವಾಸ್, ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here