ವೀರಶೈವ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ

0
213

ಕೊಟ್ಟೂರು : ಪಟ್ಟಣದ ಪಂಚಮಶಾಲಿ ಸಮುದಾಯ ಭವನದಲ್ಲಿ ಮಂಗಳವಾರದಂದು ನಡೆದ ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು -ಉಪಾಧ್ಯಕ್ಷರು ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ತಾಲೂಕಿನ ವೀರಶೈವ ಪತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ. ವಿವೇಕಾನಂದ ಉಪಾಧ್ಯಕ್ಷರಾಗಿ ಶ್ರೀಮತಿ ಗಾಯತ್ರಿ ದೇವಿ ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ. ಮಾನಸ ತಿಳಿಸಿದರು.

ನಂತರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ವಿವೇಕಾನಂದ ಮಾತನಾಡಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿ ಕ್ಷೇತ್ರಕ್ಕೆ ವೀರಶೈವ ಲಿಂಗಾಯಿತ ಸಮಾಜ ಅಪಾರ ಕೊಡುಗೆ ನೀಡಿದೆ. ಸಂಘಕ್ಕೆ ಯಾವುದೇ ಚುತ್ತಿ ಬರದಂತೆ ತನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಅದಕ್ಕೆ ನಿಮ್ಮೆಲ್ಲರ ಸಹಕಾರ ನೀಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಗಳಾದ ಜಿ. ಸಿ ಕೊಟ್ರೇಶ್ಪ್ಪ ಚಪ್ಪರದಹಳ್ಳಿ,ಬಿ.ಪಂಪಾಪತಿ, ಎಂ.ಶಿವಣ್ಣ, ಹೆಚ್ ಎನ್. ಶ್ರೀ ಮತಿ ಲೀಲಾ , ಡಿ ಶಿವಚರಣ, ಎಸ್. ಕೊಡದಪ್ಪ, ಹೆಚ್. ಪ್ರಕಾಶ್, ಹಾಗೂ ಇತರರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here