ಬಳ್ಳಾರಿ:ನ:25;-ಬಳ್ಳಾರಿ ನಗರದ ಶ್ರೀ ಆದಿದೇವತೆ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಗುರುವಾರ ಶಿವಕುಮಾರ್ ಎಂ ಇವರ ನಿರ್ದೇಶನದ ಕೆಸರಿನ ಕಮಲಗಳು ಎನ್ನುವ ಚಿತ್ರೀಕರಣದ ಪೂಜೆ ಕಾರ್ಯಕ್ರಮ ಇಂದು ನೆರವೇರಿತು.
ಈ ಕಾರ್ಯಕ್ರಮಕ್ಕೆ ನಗರದ ಶ್ರೀ ಕಲ್ಯಾಣ ಮಹಾಸ್ವಾಮಿಗಳು ಶ್ರೀ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ. ಬಿಎಂ ರವಿಶಂಕರ್ ಗುರೂಜಿ ಶ್ರೀಮತಿ ಮೀನಾಕ್ಷಮ್ಮ ಕೆಸಿ.ಕೊಂಡಯ್ಯ. ದುರ್ಗಮ್ಮ ದೇವಸ್ಥಾನದ ಧರ್ಮಕರ್ತರಾದ ಪಿ.ಗಾದೆಪ್ಪ, ಸುಭಾಷ್ ಚಂದ್ರ ಕೌಲ್ ಬಜಾರ್ ಸಿಪಿಐ, ನಿಷ್ಠಿರುದ್ರಪ್ಪ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರು ಸರಳಾದೇವಿ ಕಾಲೇಜು ಪ್ರಾಂಶುಪಾಲರಾದ ಹೇಮರೆಡ್ಡಿ,ರಾಮಕೃಷ್ಣ ರೇಣಿಗುಂಟ ಫೌಂಡೇಶನ್ ಬಳ್ಳಾರಿ ಜೆಪಿ ಮಂಜು ಸೇವಾ ಸಮಿತಿ ಬಳ್ಳಾರಿ, ಇವರುಗಳು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಚಿತ್ರೀಕರಣಕ್ಕೆ ಶುಭಹಾರೈಸಿದರು. ಈ ಚಲನಚಿತ್ರದ ನಿರ್ಮಾಪಕರು ಆದ ಹಿರೇಮಠ್ ಸಹ ನಿರ್ಮಾಪಕರು ವೈ ಎಂ ಸಿದ್ದೇಶ್ ಕುಮಾರ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು