ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ,ಜರುಗಿದ ಪಟ್ಟಣ ಪಂಚಾಯ್ತಿ ಸಭೆಯಲ್ಲಿ.ಪಟ್ಟಣ ಪಂಚಾಯ್ತಿ ಸಂತೆ ಮೈದಾನದಲ್ಲಿ ದನ ಹಾಗೂ ಕುರಿ ಸಂತೆ ನಡೆಸಲು, ಸ್ಥಳಾವಕಾಶ ನೀಡುವಂತೆ ಕುರಿಗಾರರು ಹಾಗೂ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತದಲ್ಲಿರುವ ದಲ್ಲಾಳಿಗಳು,ದನ ಕುರಿಗಳನ್ನು ಉತ್ಪನ್ನದಾರರು ಮಾರಲು ನೆರೆಹೊರೆ ತಾಲೂಕುಗಳಿಗೆ ತೆರಳುತ್ತಿದ್ದಾರೆ.30ಕಿಮೀ ದೂರದ ಮಾರುಕಟ್ಟೆಗೆ ಹೋಗಬೇಕಿದೆ,ಕಾರಣ ಪಟ್ಟಣದಲ್ಲಿಯೇ ದನ ಕುರಿ ಮಾರಾಟ ಮಾಡಲು ಸಂತೆ ಅನಿವಾರ್ಯವಿದ್ದು,ಸ್ಥಳಾವಕಾಶ ನೀಡಬೇಕೆಂದು ಪಪಂ ಅಧ್ಯಕ್ಷರು ಉಪಾಧ್ಯಕ್ಷರಲ್ಲಿ ಸರ್ವಸದಸ್ಯರಲ್ಲಿ,ಸಾರ್ವಜಿಕರು ಮನವಿ ಮಾಡಿದ್ದಾರೆ.
ಅಧ್ಯಕ್ಷರಾದ ಶ್ರೀಮತಿ ಶಾರದಾಬಾಯಿ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಊರಮ್ಮ ರವರು. ಸಿಬ್ಬಂದಿ ವರ್ಗ,ಪೌರಕಾರ್ಮಿಕರು ಹಾಗೂ ನೀರು ಸರಬರಾಜು ಸಿಬ್ಬಂದಿ ವರ್ಗಕ್ಕೆ ಸಾರ್ವಜನಿಕರೊಂದಿಗೆ ಸ್ಪಂದಿಸುವಂತೆ,ಸೂಕ್ತ ನಿರ್ಧೇಶನಗಳನ್ನು ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸದಸ್ಯರಾದ ಪೂರ್ಯ ನಾಯ್ಕ್,ಕಾಲ್ಚಟ್ಟಿಈಶಪ್ಪ,ಚಂದ್ರಪ್ಪ,ಶ್ರೀಮತಿ ರೇಣುಕಾ ದುರ್ಗೇಶ್,ಶ್ರೀಮತಿ ಸರಸ್ವತಿ ರಮೇಶ್,ಸಿರಿಬಿ ಮಂಜುನಾಥ,ಬಸು ನಾಯಕ್ ಸೇರಿದಂತೆ ಇತರೆ ಸದಸ್ಯರು ಭಾಗವಹಿಸಿದ್ದರು.
✍️ ಕೆ. ಎಸ್ .ಮುರಳೀಧರ. ಕೂಡ್ಲಿಗಿ