ಬಳ್ಳಾರಿ,ಜ.25 : ನಗರದ ಬೊಮ್ಮನಹಾಳ್ ರಸ್ತೆಯಲ್ಲಿ ನಿರ್ಮಿಸಿರುವ ಕಲ್ಯಾಣ ಮಠ ನೂತನ ಬಸ್ ನಿಲ್ದಾಣವನ್ನು ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಅವರು ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಕಮ್ಮರಚೇಡು ಸಂಸ್ಥಾನ ಮಠದ ಪೂಜ್ಯ ಕಲ್ಯಾಣ ಮಹಾಸ್ವಾಮಿಗಳು, ಕುರುಗೋಡಿನ ಪೂಜ್ಯ ರಾಘವಾಂಕ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಸವದತ್ತಿಯ ಪೂಜ್ಯ ಶ್ರೀ.ಮಹಾಂತ ಸ್ವಾಮಿಗಳು, ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಇಬ್ರಾಹಿಂ ಬಾಬು ಮತ್ತು ರಾಬಕೊ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರ ರೆಡ್ಡಿ, ಮುಖಂಡರಾದ ಶ್ರೀನಿವಾಸ್ ಮೋತ್ಕರ್ ಮತ್ತು ದೃಷ್ಠಿ ಡೆವಲಪಸ್ರ್ಸ ಸಂಸ್ಥೆಯ ಸದಸ್ಯರುಗಳು ಇದ್ದರು.