ಕನ್ನಡ ವಿವಿಯಲ್ಲಿ ಸಿಬಿಸಿಎಸ್ ತರಬೇತಿ

0
97

ಬಳ್ಳಾರಿ,ಫೆ.10 :ಕನ್ನಡ ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ವಿದ್ಯಾರ್ಥಿಗಳಿಗೆ ಒಂದು ದಿನದ `ಆಯ್ಕೆ ಆಧಾರಿತ ಗುಣಾಂಕ ಪದ್ಧತಿ’ (ಸಿಬಿಸಿಎಸ್) ತರಬೇತಿ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯುಎಸಿ)ದಿಂದ ಮಂಗಳವಾರ ನಡೆಯಿತು.
ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಮತ್ತು ಐಕ್ಯುಎಸಿಯ ನಿರ್ದೇಶಕರೂ ಆದ ಪ್ರಾಧ್ಯಾಪಕ ಡಾ.ಕೆ.ಜಿ. ಪರುಶುರಾಮ ವಿದ್ಯಾರ್ಥಿಗಳಿಗೆ ಸಿಬಿಸಿಎಸ್ ಪಠ್ಯಕ್ರಮ ಹಾಗೂ ಗ್ರೇಡಿಂಗ್ ಸಿಸ್ಟಂ ಬಗೆಗೆ ಉಪನ್ಯಾಸ ನೀಡಿ, ಸಿಬಿಸಿಎಸ್ ಬಗೆಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಚರ್ಚೆ ಮಾಡುತ್ತಾ, ತರಬೇತಿಯ ಸದ್ಬಳಕೆÉ ಮಾಡಿಕೊಂಡರು.
ತರಬೇತಿಯಲ್ಲಿ ಐಕ್ಯುಎಸಿ ನಿರ್ದೇಶಕ ಡಾ. ಎ.ಮೋಹನ ಕುಂಟಾರ್, ಸಹಾಯಕ ನಿರ್ದೇಶಕ ಡಿ. ಪ್ರಭಾ, ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here