ಸಂಡೂರು.22:-ಸಂಡೂರು ತಾಲೂಕಿನ ಗಂಗಾಲಾಪುರ ಗ್ರಾಮದಲ್ಲಿ ಸಂಡೂರಿನಿಂದ ಗಂಗಲಾಪುರಕೆ ಹೋಗುವ ಮಾರ್ಗದಲ್ಲಿ ಹೊರಚರಂಡಿ ಕಸಕಡ್ಡಿ
ಕಲ್ಲು ಮಣ್ಣುಗಳಿಂದ ಮುಚ್ಚಿ (ಬ್ಲಾಕ್) ಆಗಿ ದುರ್ವಾಸನೆಯಿಂದ ಗಬ್ಬು ನಾರುತ್ತಿದೆ.
ಅದೇ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಬಸ್ ಪ್ರಯಾಣಿಕರಿಗೆ ಮತ್ತು ಸ್ಥಳೀಯವಾಗಿ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಸಾರ್ವಜನಿಕರಿಗೆ ತುಂಬಾ ಕಿರಿಕಿರಿಯಾಗಿದೆ ಪ್ರತಿನಿತ್ಯ ಪ್ರತಿ ಬಾರಿಯು ಅಧಿಕಾರಿಗಳಿಗೆ ಇಡೀ ಶಾಪಹಾಕುತ್ತ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಉದ್ಭವಿಸಿದೆ..
ಈ ಚರಂಡಿಯಲ್ಲಿ ದುರ್ವಾಸನೆ ಬರುತ್ತಿರುವುದನ್ನು ಕಂಡುಕಾಣದಂತೆ ಜಾಣ ಕುರುಡರಂತೆ ಬೇಜವಾಬ್ದಾರಿತನದಿಂದ ವರ್ತಿಸುವ ಅಧಿಕಾರಿಗಳು ಮೂರನ್ನು ಮುಚ್ಚಿಕೊಂಡು ಓಡಾಡುತ್ತಾ ಇದ್ದಾರೆ.
ಸಂಬಂಧಪಟ್ಟ ಪಂಚಾಯತಿ ಅಧಿಕಾರಿಗಳು ಆದಷ್ಟು ಬೇಗ ಚರಂಡಿಯ ಸ್ವಚ್ಛತೆಗೆ ಮುಂದಾಗಬೇಕಿದೆ ದುರ್ನಾತದಿಂದ ಸಾಂಕ್ರಾಮಿಕ ರೋಗಗಳು ಹರಡಬವುದೆಂದು ಸ್ಥಳೀಯರು ಅಭಿಪ್ರಾಯ.
ವರದಿ:-ಮಲ್ಲಿಕಾರ್ಜುನ್ ಪೂಜಾರ್