ವರದಿ :ಇಬ್ರಾಹಿಂ ಖಲೀಲ್. ಟಿ
ವಿಜಯನಗರ: ಕೂಡ್ಲಿಗಿ ತಾಲೂಕಿನ ಕಾನಹೊಸಳ್ಳಿ ಹೋಬಳಿಯ ಹೂಡೇಂ ಗ್ರಾಮ ಪಂಚಾಯತಿಯಲ್ಲಿ (ಜೂ-4) ಕೋವಿಡ್-19 ಟಾಸ್ಕ ಪೋರ್ಸ ಸಮಿತಿಯಲ್ಲಿ ಕೊರೋನ ಮಹಾಮಾರಿಯು ಗ್ರಾಮೀಣ ಪ್ರದೇಶಗಳ ಜನರನ್ನು ಹೆಚ್ಚು ಹೆಚ್ಚು ಆವರಿಸಿಕೊಳ್ಳುತ್ತಿದ್ದ ಹಳ್ಳಿ ಗಾಡಿಗಳ ಜನರ ನೆಮ್ಮದಿ ಹಾಳು ಮಾಡುತ್ತಿದ್ದು ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ರಕ್ಷಣೆ ದೃಷ್ಟಿಯಿಂದ
ಕೋವಿಡ್-19 ರೋಗ ಲಕ್ಷಣದ ಬಗ್ಗೆ ಮನೆ ಮನೆ ಸರ್ವೇ ಮಾಡಿ.. ಎಂದು ಸರ್ವೆ ಮಾಡುವ ವಾರಿಯರ್ಸ್ ಇಗೆ
ಜನರಲ್ ಕಿಟ್, ಮಾಸ್ಕ, ಬ್ಲೌಸ್, ಸ್ಯಾನಿಟೈಜರ್ ವಿಸ್ತರಿಸಲಾಯಿತು. ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಶ್ರೀ ಮಹಾಂತೇಶಯ್ಯ, ಹಾಗೂ ನೋಡಲ್ ಅಧಿಕಾರಿ ಶ್ರೀ ರಾಮಾನಂಜನೇಯಲು, ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಎಂ ಕರಿಬಸಮ್ಮ-ದುರುಗಪ್ಪ, ಉಪಾಧ್ಯಕ್ಷರಾದ ಶ್ರೀ ಕೆ ಎನ್ ರಾಘವೇಂದ್ರ, ಮತ್ತು ಗ್ರಾಮ ಪಂಚಾಯಿತಿ ಸರ್ವಸದಸ್ಯರು, ಡಾ” ಧರ್ಮ ನಾಯಕ್ ಆರೋಗ್ಯ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಮತ್ತು ಗ್ರಾಮ ಲೆಕ್ಕಿಗರು ಎಲ್ಲಾ ಶಾಲೆಗಳ ಮುಖ್ಯಗುರುಗಳು ಗ್ರಾ.ಪಂ.ಕಾರ್ಯದರ್ಶಿ ಚಂದ್ರಪ್ಪ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರು.