ಸೂಚನಾ ಫಲಕವಿಲ್ಲದ ಸರ್ಕಾರಿ ಕಟ್ಟಡ ಕಾಮಗಾರಿ

0
470

ವಿಜಯನಗರ:ಸೆ:15: ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಪಟೇಲ್ ನಗರದ ಪಂಚಮುಖಿ ಆಂಜನೇಯ ಗುಡಿ ಹತ್ತಿರ ವಾರ್ತಾ ಇಲಾಖೆ ಕಚೇರಿ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಿರುತ್ತಾರೆ.ಕಟ್ಟಡ ಕಾಮಗಾರಿ ನಿಯಮಗಳ ಪ್ರಕಾರ ನಾಮಫಲಕವನ್ನು ಪ್ರದರ್ಶನ ಮಾಡಿರುವುದಿಲ್ಲ.

ಸಾರ್ವಜನಿಕರಿಗೆ ಕಟ್ಟಡದ ಅಂದಾಜು ಮೊತ್ತ ಹಾಗೂ ಲೆಕ್ಕ ಶೀರ್ಷಿಕೆ, ಯಾವ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಗುತ್ತಿಗೆದಾರನ ಹೆಸರು, ವಿಳಾಸ ಯಾವ ಮಾಹಿತಿಯನ್ನು ನೀಡದೆ ಮರೆಮಾಚಿದ್ದಾರೆ.

ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಕಾಮಗಾರಿಯ ಗುಣಮಟ್ಟ ಮತ್ತು ಅಂದಾಜು,ತುಲನಾತ್ಮಕ ವೆಚ್ಚದ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ. ಕಾಮಗಾರಿಯನ್ನು ಯಾವ ಇಲಾಖೆಯ ಸಂಸ್ಥೆಗಳ ಮೂಲಕ ಅಧಿಕಾರಿಗಳು ನಿರ್ವಹಣೆ ಮಾಡುತ್ತಿದ್ದಾರೆ. ಕಟ್ಟಡ ಕಾಮಗಾರಿ ಗುಣಮಟ್ಟದ ವಿಷಯದಲ್ಲಿ ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಯೋಜನೆಗಳನ್ನು ಅಭಿವೃದ್ಧಿ ಕಾರ್ಯಗಳನ್ನು ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ತನ್ನ ಇಲಾಖೆಯ ಯೋಜನೆಯ ಸೂಚನಾ ನಾಮಫಲಕ ವಿವರಗಳನ್ನು ಪ್ರದರ್ಶಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here