ಸಂಡೂರು:ಜ:21:-ತಾಲೂಕಿನ ಜೈಸಿಂಗ್ ಪುರ, ಕೃಷ್ಣಾ ನಗರ, ವೆಂಕಟಗಿರಿ, ನಾಗಲಾಪುರ ಗ್ರಾಮಗಳಲ್ಲಿ ಪ್ರಿಕಾಷನ್ ಡೋಸ್ ಲಸಿಕಾ ಮೇಳ ನಡೆಯಿತು, ತಾರಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುನಿತಾ ಅವರು ಲಸಿಕಾ ಮೇಳ ಗ್ರಾಮಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಿದರು,
ಲಸಿಕೆ ಪಡೆಯಲು ಜನರು ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಮನೆಮನೆಗೆ ಬೇಟಿ ನೀಡಿ ಲಸಿಕೆ ಕೊಡುವಂತೆ ಸೂಚನೆ ನೀಡಿದರು, ಅದರಂತೆ ನಾಲ್ಕು ಗ್ರಾಮಗಳಲ್ಲಿ ಒಟ್ಟು 232 ಡೋಸ್ ಪ್ರಿಕಾಷನ್ ಮತ್ತು ಎರಡನೇ ಡೋಸ್ ಲಸಿಕೆಯನ್ನು ನೀಡಲಾಯಿತು, ಮಾಧ್ಯಮಗಳಲ್ಲಿ ಪಾಸಿಟಿವ್ ಕೇಸ್ ವರದಿ ಬಿತ್ತರವಾದಾಗ ಜನ ವ್ಯಾಕ್ಸಿನ್ ಪಡೆಯಲು ಮುಂದೆ ಬರುವರು, ಇದು ಒಳ್ಳೆಯದಲ್ಲ, ಒಟ್ಟು ಮೂರು ಡೋಸ್ ಲಸಿಕೆ ಪಡೆಯುವುದು ಒಳ್ಳೆಯದು ಎಂದು ಅವರು ಹೇಳಿದರು, ಹಾಗೆ ಗಂಡಾಂತರ ಗರ್ಭಿಣಿ ಮಹಿಳೆಯ ಮನೆ ಬೇಟಿ ಮಾಡಿ ಆರೋಗ್ಯ ವಿಚಾರಣೆ ಮಾಡಿದರು.
ಈ ಸಂದರ್ಭದಲ್ಲಿ ಸಿ.ಹೆಚ್.ಒ ಶಿಲ್ಪಾ, ಆಶಾ ಕಾರ್ಯಕರ್ತೆ ಶಕುಂತಲಾ ಮತ್ತು ಕೆ.ಹೆಚ್.ಪಿ.ಟಿ ಸಿಬ್ಬಂದಿ ಹಾಜರಿದ್ದರು