ಶಿಕ್ಷಕಿ ಶಾಂತವ್ವ ರಾಷ್ಟ್ರ ಮಟ್ಟದ ಕ್ರೀಡಾಕೂಟದ ಮಹಿಳಾ ಕುಸ್ತಿ ವಿಬಾಗದ ಪಂದ್ಯಾವಳಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ

0
157

ಸಂಡೂರು:ಮಾ:08:-ಇತ್ತೀಚಿಗೆ ಸರ್ಕಾರಿ ನೌಕರರ ರಾಷ್ಟ್ರ ಮಟ್ಟದ ಕ್ರೀಡಾಕೂಟ ಮಹಿಳಾ ಕುಸ್ತಿ ಪಂದ್ಯಾವಳಿ ಚಂಡಿಗಡದಲ್ಲಿ ನಡೆದಿದ್ದು,

ಈ ಕ್ರೀಡಾಕೂಟದಲ್ಲಿ ನಮ್ಮ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಲಕ್ಷ್ಮಿಪುರ ಸರ್ಕಾರಿ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಶಾಂತವ್ವ,ಅವರು ಚಂಡಿಗಡದಲ್ಲಿ ನಡೆದ ಕ್ರೀಡಾಕೂಟದ ಮಹಿಳಾ ಕುಸ್ತಿ ಪಂದ್ಯಾವಳಿಯ 72 ಕೆಜಿ ಕುಸ್ತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಕ್ಕೆ ಹಾಗೂ ಜಿಲ್ಲಾ ಮತ್ತು ತಾಲೂಕಿಗೆ ಕೀರ್ತಿ ತಂದಿರುತ್ತಾರೆ.

ಶಿಕ್ಷಕಿ ಶಾಂತವ್ವ ಅವರಿಗೆ ಸಂಡೂರು ತಾಲೂಕು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಚೌಕಳ್ಳಿ ಪರಶುರಾಮಪ್ಪ ಹಾಗೂ ಕಾರ್ಯದರ್ಶಿ ಉಲ್ಲೇಶಿ, ಗೌರವಾಧ್ಯಕ್ಷರಾದ ಸಿದ್ದಣ್ಣ, ಖಜಾಂಚಿ ಶಿವಕುಮಾರ್ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಹಾಗೂ ಸಮಸ್ತ ನೌಕರರು ಹಾಗೂ ಶಿಕ್ಷಕರು ಅಭಿನಂದಿಸುತ್ತಾರೆ.

ಶಿಕ್ಷಣ ಇಲಾಖೆಯಲ್ಲಿ ಇಂತಹ ಸಾಧನೆ ಮಾಡಿದ ಶಿಕ್ಷಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ.ಐ.ಆರ್.ಅಕ್ಕಿ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here