ಕೆ.ಮಲ್ಲಿನಾಥ್ ಗೆ ಬಹುಜನ ಸಾಹಿತ್ಯ ಅಕಾಡೆಮಿ ಯಿಂದ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ

0
319

ಬಳ್ಳಾರಿ:- ಇತ್ತೀಚಿಗೆ ತಿರುಪತಿಯಲ್ಲಿ ನಡೆದ ಬಹುಜನ ಸಾಹಿತ್ಯ ಅಕಾಡೆಮಿ ಯಿಂದ 5ನೇ ದಕ್ಷಿಣ ಭಾರತದ ಸಮ್ಮೇಳನದಲ್ಲಿ ಬಳ್ಳಾರಿ ನಗರದ 23ನೇ ವಾರ್ಡ್ ಮಹಾನಂದಿ ಕೊಟ್ಟಂನ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಕಾರ್ಯದರ್ಶಿ , ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷರಾದ ಶ್ರೀ.ಕೆ.ಮಲ್ಲಿನಾಥ್ ರವರಿಗೆ ಡಾ|| ಬಿ.ಆರ್ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಆಕಾಡೆಮಿಯ ಅಧ್ಯಕ್ಷ ನಲ್ಲಾ ರಾಧ ಕೃಷ್ಣ , ಪ್ರಧಾನ ಕಾರ್ಯದರ್ಶಿ ಡಾ.ಯು.ಸುಬ್ರಹ್ಮಣಿಯನ್ ಅವರು ಸಮಾಜದಲ್ಲಿ ಶೋಷಿತ ಎಸಿ , ಎಸ್ಟಿ , ಹಿಂದುಳಿದ , ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಿದವರಿಗೆ ನೀಡುವ ಪ್ರಶಸ್ತಿಯನ್ನು ಕೆ.ಮಲ್ಲಿನಾಥ್ ರವರಿಗೆ ನೀಡಿ ಗೌರವಿಸಲಾಗುತ್ತದೆಂದು ಆಕಾಡೆಮಿ ಅಧ್ಯಕ್ಷ ರಾಧಕೃಷ್ಣ ಹೇಳಿದರು.

ಈ ಸಮ್ಮೇಳನದಲ್ಲಿ ಆಂದ್ರಪ್ರದೇಶ , ಕರ್ನಾಟಕ , ತಮಿಳುನಾಡು , ಕೇರಳ , ಪಾಂಡಿಚೇರಿಯಿಂದ ಸುಮಾರು 600ಕ್ಕೂ ಹೆಚ್ಚು ಗಣ್ಯರು ಪಾಲ್ಗೊಂಡಿದ್ದರು ಅಕಾಡೆಮಿಯ ದಕ್ಷಿಣ ಭಾರತದ ಕಾರ್ಯದರ್ಶಿ ಜಿ.ವಿಷ್ಣುವರ್ಧನ್ , ಪ್ರಧಾನ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಾದ ಡಾ.ಎಸ್.ಗೋಪಿ ಚಂದ್ರನ್ , ಸೋಮನ್ , ಡಾ.ಎ.ವೆಂಕಟೇಶ್ , ಡಾ.ತಿರುಮಲ ಅರಸನ್ , ಹಾಗೂ ಇನ್ನೂ ಹಲವಾರು ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here