ಮಡಿಕೇರಿ ಜು.04:-ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಶನಿವಾರ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪೆÇೀಷಕರು ಆಗಿರುವ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಹೋಟೆಲ್ ಮಯೂರದ ಸಭಾಂಗಣದಲ್ಲಿ ಭೇಟಿಯಾಗಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಕೊಡಗು ಜಿಲ್ಲೆಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷರು ಆಗಿರುವ ಡಾ.ಬಿ.ಸಿ.ಸತೀಶ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಸ್ಥೆಯ ಉಪಾಧ್ಯಕ್ಷರು ಆಗಿರುವ ಮಲಚೀರ ಎ. ಅಯ್ಯಪ್ಪ, ಜಿಲ್ಲಾ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ, ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಜಿಮ್ಮಿ ಸ್ವಿಕೇರ, ಸ್ಥಾನಿಕ ಆಯುಕ್ತರಾದ ಎಚ್. ಆರ್. ಮುತ್ತಪ್ಪ, ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಧನಂಜಯ, ಕಾರ್ಯದರ್ಶಿ ಉಷಾ ರಾಣಿ, ಜಿಲ್ಲಾ ಸಂಘಟಕರಾದ ಯು.ಸಿ. ದಮಯಂತಿ, ಸ್ಕೌಟ್ಸ್ ಮಾಸ್ಟರ್ ಕೆ.ಯು.ರಂಜಿತ್ ಹಾಗೂ ಮಡಿಕೇರಿ ಸಂತ ಜೋಸೆಫ್ ಶಾಲೆಯ ಪ್ಲಾಕ್ ಲೀಡರ್ ಗೆಟ್ರೋಡ್ ಟಿ.ಜಿ.ಗೈಡ್ಸ್ ಕ್ಯಾಪ್ಟನ್ ಪ್ರೇಮ, ಬುಲ್ಬುಲ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಇದ್ದರು.
ಸಭಾಂಗಣದಲ್ಲಿ ಬುಲ್ ಬುಲ್ ವಿದ್ಯಾರ್ಥಿಗಳು ಹೂಗುಚ್ಛ ನೀಡಿ ರಾಜ್ಯ ಪಾಲರನ್ನು ಸ್ವಾಗತಿಸಿದರು. ನಂತರ ಮಾತನಾಡಿದ ಅವರು ಎಲ್ಲರೊಂದಿಗೆ ಛಾಯಾಚಿತ್ರವನ್ನು ತೆಗೆಸಿಕೊಂಡರು. ಉನ್ನತ ಭದ್ರತೆ ಹೊಂದಿರುವ ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ರಾಜ್ಯಪಾಲರ ಸರಳತೆ ಎಲ್ಲರಿಗೂ ಮಾದರಿಯಾಯಿತು.