ಕಂಪ್ಲಿ: ಜೂ 28, ರಾಜ್ಯಕ್ಕೆ ಕಲೆ, ಸಮಾಜ ಸೇವೆ, ಶೈಕ್ಷಣಿಕ ರಂಗಕ್ಕೆ ಅಪಾರ ಕೊಡುಗೆ ನೀಡಿ ಇತ್ತೀಚಿಗೆ ಅಕಾಲಿಕ ಮರಣ ಹೊಂದಿದ ಕರ್ನಾಟಕ ರತ್ನ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ರವರ ಹೆಸರನ್ನು ಅಧಿಕೃತವಾಗಿ ಕಂಪ್ಲಿಯ ಪ್ರಮುಖ ರಸ್ತೆಯಾದ ಕಂಪ್ಲಿ-ಕೊಟ್ಟಾಲ್ ರಸ್ತೆಗೆ ನಾಮಕರಣ ಮಾಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು!
ಕಳೆದ ನವೆಂಬರ್ ತಿಂಗಳಲ್ಲಿ ಮನವಿ ಸಲ್ಲಿಸಿದ್ದು ಸದರಿ ಮನವಿ ಪತ್ರವನ್ನ ಮಾರ್ಚ್ ತಿಂಗಳಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಸರ್ವ ಸದಸ್ಯರ ಸಹ ಮತ ಪಡೆದು ನಿರ್ಣಯ ಹೊರಡಿಸಲಾಗಿರುತ್ತದೆ, ನಿರ್ಣಯ ಹೊರಡಿಸಿ ಸುಮಾರು ಮೂರು ತಿಂಗಳು ಕಳೆದರೂ ಅಧಿಕೃತವಾಗಿ ಸದ್ರಿ ರಸ್ತೆಗೆ ಪುನೀತ್ ರವರ ಹೆಸರನ್ನ ನಾಮಕರಣಗೊಳಿಸದೆ ಇರುವುದು ವೈಯಕ್ತಿಕವಾಗಿ ಮತ್ತು ಕಂಪ್ಲಿ ನಗರದ ಅಪಾರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿರುತ್ತದೆ, ಆದ್ದರಿಂದ ತ್ವರಿತವಾಗಿ ಪುರಸಭೆ ಕಛೇರಿಯಿಂದ ಅಧಿಕೃತವಾಗಿ ರಸ್ತೆ ನಾಮಕರಣ ಮಾಡಬೇಕು ಹಾಗು ಸದರಿ ಈ ರಸ್ತೆಯ ಅಂಗಡಿ ಮುಂಗಟ್ಟುಗಳಿಗೆ ಪುನೀತ್ ರಾಜ್ ಕುಮಾರ್ ರಸ್ತೆಯೆಂದು ಬರೆಸಿಕೊಳ್ಳುವಂತೆ / ಹಾಕಿಕೊಳ್ಳುವಂತೆ ಸೂಚಿಸಲು ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಪುರಸಭೆ ಕಚೇರಿಗೆ ಮನವಿ ಸಲ್ಲಿಸಿದ್ದಾರೆ!