ಕೊಟ್ಟೂರು: ಆಗಸ್ಟ್:6 : ವಿಕಾಸ ಬ್ಯಾಂಕ್ ಥಟ್ ಅಂತ ಹೇಳಿ ನೇರ ಕಾರ್ಯಕ್ರಮ ಕೊಟ್ಟೂರಿನ ಶ್ರೀ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 13ರಂದು ನಡೆಯಲಿದೆ ಎಂದು ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹಿರೇಮಠ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಶನಿವಾರ ಆಗಷ್ಟ13 ರಂದು ಬೆಳಿಗ್ಗೆ 11ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಗಿನ್ನಿಸ್ ವಿಶ್ವ ದಾಖಲೆಯ ಡಾ.ನಾ.ಸೋಮೇಶ್ವರ ಸಾರಥ್ಯದಲ್ಲಿ ವೀವಿಡ್ ಲಿಫ್, ಯಾಜಿ ಪ್ರಕಾಶನ ಸಹಯೋಗದೊಂದಿಗೆ ಜರುಗುವ ಕಾರ್ಯಕ್ರಮದಲ್ಲಿ ಕೊಟ್ಟೂರು ಜಾನುಕೋಟಿ ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.
![](https://haisandur.com/wp-content/uploads/2022/08/IMG-20220807-WA0142.jpg)
ನೀವೂ ಸ್ಪರ್ಧಿಗಳಾಗಬಹುದು:
ವಿದ್ಯಾರ್ಥಿಗಳು ಹಾಗೂ ಪಾಲಕ-ಪೋಷಕರು ಸ್ಫರ್ಧೆಯಲ್ಲಿ ಜೋಡಿಯಾಗಿ ಪಾಳ್ಗೊಳ್ಳಲು ಅವಕಾಶಗಳಿದ್ದ ವಿದ್ಯಾರ್ಥಿಗಳು, ಸ್ನೇಹಿತರು, ಅಪ್ಪ-ಮಗ, ತಾಯಿ-ಮಗಳು ಹಾಗೂ ದಂಪತಿಗಳು ಜೋಡಿಯಂತೆ ಸ್ಫರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶಗಳಿದ್ದು, ಭಾಗವಹಿಸಲು ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ ಹೆಸರು ನೊಂದಾಯಿಸಲು ಕೋರಿದ್ದಾರೆ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು : 9620220921, 9620220922.