ಬ್ಯಾಂಕ್ ನಲ್ಲಿ ಸರ್ವರ್ ಸಮಸ್ಯೆ,! ಹಣಕ್ಕಾಗಿ ಗ್ರಾಹಕರು ಪರದಾಟ,`

0
344

ವಿಜಯನಗರ :28:-ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರು ಹಣಕ್ಕಾಗಿ ಪರದಾಡು ಸ್ಥಿತಿ ನಿರ್ಮಾಣವಾಗಿತ್ತು ಈ ಬ್ಯಾಂಕ್ ನಲ್ಲಿ ಸುಮಾರು ಒಂಭತ್ತರಿಂದ, ಹತ್ತಳ್ಳಿ ಜನರು ಈ ಬ್ಯಾಂಕನ್ನು ಅವಲಂಬಿಸಿದ್ದಾರೆ.ಹಾಗಾಗಿ ಈ ಬ್ಯಾಂಕ್ ಗೆ ಪ್ರತಿ ನಿತ್ಯ ನೂರಾರು ಗ್ರಾಹಕರು ಬರುತ್ತಾರೆ. ಆದರೆ ಬ್ಯಾಂಕ್ ನಲ್ಲಿ ಬಿಎಸ್ಎನ್ಎಲ್, ಏರ್ಟೆಲ್ ನ ಎರಡೂ ಸರ್ವರ್ ಇಲ್ಲದೆ ಗ್ರಾಹಕರಿಗೆ ಗಂಟೆಗಟ್ಟಲೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಯಿತು.

ಹೀಗಾಗಿ ಜನರು ನಾವು ತುಂಬಾ ದೂರದ ಹಳ್ಳಿಗಳಿಂದ ಬರುತ್ತೇವೆ.ಈಗ ಸರ್ವರ್ ಇಲ್ಲ ಅಂದ್ರೆ ನಾವು ಏನ್ ಮಾಡೋದು ಪ್ರತಿ ದಿನ ಬದುಕು, ಬಾಳ್ವೇ ಬಿಟ್ಟು ಬರೀ ಬ್ಯಾಂಕ್ ಗೆ ಅಲೆದಾಡಬೇಕಾಗುತ್ತಾ ಎಂದು ಗ್ರಾಹಕರು ಗೊಣಗುತ್ತಿದ್ದ ಸ್ಥಿತಿಯು ಸಹಾ ನಿರ್ಮಾಣವಾಗಿತ್ತು ಆದರೆ ಏನೇ ಆಗ್ಲೀ ಮುಂದಿನ ದಿನಗಳಲ್ಲಿ ಸಂಬಂಧಿಸಿದವರು ಈ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳಲೀ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಈ ರೀತಿ ಸರ್ವರ್ ಸಮಸ್ಯೆ ಈ ಮೊದಲು ಬಂದಿಲ್ಲ ಆದರೆ ಈ ದಿನ ಸಮಸ್ಯೆಯಾಗಿದೆ. ಸಂಬಂಧಿಸಿದವರಿಗೆ ತಿಳಿಸಲಾಗಿದೆ. ಸರಿಪಡಿಸಿ ಕೊಡ್ತೀವಿ ಅಂತ ಹೇಳಿದ್ದಾರೆ. ಗ್ರಾಹಕರಿಗೆ ತೊಂದರೆ ಆಗಿದೆ. ಆದರೆ ಮುಂದಿನ ದಿನಗಳಲ್ಲಿ ಇಂತಹ ಸ್ಥಿತಿ ಬರದಂತೆ ನೋಡಿ ಕೊಳ್ತೀವಿ ಎಂದು ಬ್ಯಾಂಕ್ ನ ಅಸಿಸ್ಟೆಂಟ್ ಮೆನೇಜರ್, ಶೀಲಾ ಪ್ರತಿಕ್ರಿಯಿಸಿದರು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here