ಕೊಟ್ಟೂರೇಶ್ವರ ಕಾಲೇಜ್ ನ ಹಾಳು ಬಿದ್ದಿರುವ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಪಾಠ.!!

0
1110

ಕೊಟ್ಟೂರು:ಸೆ:04:- ತಾಲೂಕಿನ ಕೊಟ್ಟೂರೇಶ್ವರ ಕಾಲೇಜ್ ಪ್ರತಿಷ್ಠಿತರು ಓದಿದಂತಹ ಕಾಲೇಜ್ ಇದು. ಇಲ್ಲಿ ವ್ಯಾಸಂಗ ಮಾಡಿದವರು ರಾಜ್ಯದ ನಾನಾ ಹುದ್ದೆಗಳಲ್ಲಿ ಇಂದು ಹೆಸರು ಪಡೆದಿದ್ದಾರೆ. ಪ್ರತಿಭಾನ್ವಿತರು ಹೊರಹೊಮ್ಮಿದ ಕಾಲೇಜ್
ಕಟ್ಟಡದ ಇಂದಿನ ಸ್ಥಿತಿ ನಿಜಕ್ಕೂ ಕೂಡ ಶೋಚನೀಯವಾಗಿದೆ. ಕುಸಿಯುವ ಹಂತದಲ್ಲಿ ಇದ್ದರೂ ವಿದ್ಯಾರ್ಥಿಗಳು ಪ್ರಾಣದ ಜೊತೆಗೆ ಚೆಲ್ಲಾಟವನ್ನು ಕೊಟ್ಟೂರೇಶ್ವರ ಕಾಲೇಜ್ ಆಡಳಿತ ಮಂಡಳಿ ತಾಳಿದೆ. ಹಳೇ ಕಟ್ಟಡ ಸಂಪೂರ್ಣ ಶಿಥಿಲವಾಗಿ ಅಪಾಯಕ್ಕೆ ಆಹ್ವಾನ ನೀಡಿದ್ದರೂ ಕೊಟ್ಟೂರೇಶ್ವರ ಕಾಲೇಜ್ ಆಡಳಿತ ಮಂಡಳಿ
ಮೌನಕ್ಕೆ ಜಾರಿದೆ.

ಹಾಳುಬಿದ್ದಿರುವ ಕಟ್ಟಡದಿಂದ ವಿದ್ಯಾರ್ಥಿಗಳಿಗೆ ಅಪಾಯ.?
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಕೊಟ್ಟೂರೇಶ್ವರ ಕಾಲೇಜ್ ಆಡಳಿತ ಮಂಡಳಿ ವಿಭಾಗದ ಹಳೇ ಕಟ್ಟಡ ಇಂದು ಕುಸಿಯುವ ಹಂತದಲ್ಲಿ ಇದೆ., ಶಿಥಿಲಾವಸ್ಥಗೆ ತಲುಪಿರುವ ಕಟ್ಟಡದ ಕಾರಿಡಾರ್ ನಲ್ಲಿ ಜೀವ ಭಯದಲ್ಲಿ ಮಕ್ಕಳು ಓಡಾಟ ನಡೆಸುತ್ತಿದ್ದಾರೆ. ಈ ಕಟ್ಟಡ ಇಂದು ಪಾಳು ಬಿದ್ದಿರುವ ಸ್ಥಿತಿಗೆ , ಕೊಟ್ಟೂರೇಶ್ವರ ಕಾಲೇಜ್ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ ಎನ್ನುತ್ತಿದ್ದಾರೆ ಸಾರ್ವಜನಿಕರು, ಕಾಲೇಜ್ ವಿಭಾಗದ ಸುಮಾರು ಕೊಠಡಿಗಳು ಸಂಪೂರ್ಣವಾಗಿ ಶಿಥಲೀಕರಣಗೊಂಡಿದ್ದು ಯಾವುದೇ ಸಮಯದಲ್ಲಿ ಕುಸಿದು ಬೀಳುವ ಆತಂಕ ಎದುರಾಗಿದೆ.

ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡು ಪ್ರಯೋಜನಕ್ಕೆ ಬಾರದಂತಾಗಿವೆ. ಈಗ ಈ ಕೊಠಡಿಗಳು , ವಿಷ ಜಂತುಗಳ ವಾಸಸ್ಥಾನವಾಗಿವೆ. ಅಲ್ಲದೆ, ಕೊಳಚೆಯಿಂದಾಗಿ ಗಬ್ಬು ವಾಸನೆ ನಿರಂತರ ಬರುತ್ತಿದ್ದು, ಇದರಿಂದ ಈ ಕಟ್ಟಡದಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳಿಗೆ ನರಕ ಯಾತನೆಯಾಗಿದೆ. ಶತಮಾನದ ವರ್ಷಗಳನ್ನು ಕಂಡ ಕಾಲೇಜ್, ಇತ್ತೀಚೆಗೆ ಕೊಟ್ಟೂರೇಶ್ವರ ಕಾಲೇಜ್ ಎಂಬ ಕೀರ್ತಿ ಪಡೆದಿದ್ದು, ಕಾಲೇಜು ವಿಭಾಗಗಳು ತರಗತಿಗಳು ನಡೆಯುತ್ತಿವೆ.

ಮಳೆಗೆ ಕಟ್ಟಡ ಬೀಳುವುದಂತು ಗ್ಯಾರಂಟಿ:- ಪ್ರಥಮ, ದ್ವಿತೀಯ ಪಿಯುಸಿಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಲಾ, ವಿಜ್ಷಾನ, ವಾಣಿಜ್ಯ ತರಗತಿಗಳು ನಡೆಯುತ್ತಿದ್ದು, ಕೊಠಡಿಗಳ ಅವ್ಯವಸ್ಥೆ ಕಟ್ಟಡಗಳಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವುದಕ್ಕೆ ಸೀಮಿತವಾಗಿದೆ. ಇದರ ಜತೆಗೆ ಬಹಳ ಮುಖ್ಯವಾಗಿ ಶೌಚಾಲಯ ಸಮಸ್ಯೆ ಎದುರಿಸುತ್ತಿದೆ. ನೀರಿನ ಸೌಕರ್ಯವಿಲ್ಲದ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಗಬ್ಬುನಾತ ಬೀರುತ್ತಿದೆ. ಪಾಳುಬಿದ್ದ ಸುಮಾರು ಕೊಠಡಿಗಳನ್ನು ದುರಸ್ತಿ ಮಾಡಲು ಸಾಧ್ಯವಾದರೆ ಮಾಡಿ, ಇಲ್ಲವಾದರೆ ಅದನ್ನು ಕೆಡವಿ ನೂತನ ಕಟ್ಟಡ ಕಟ್ಟಬೇಕು ಎಂಬುವುದು ಸ್ಥಳೀಯ ಆಗ್ರಹವಾಗಿದೆ.

ದಾಖಲಾತಿಗೆ ಬರುವ ವಿದ್ಯಾರ್ಥಿಗಳು ಕಾಲೇಜಿನ ಕೊಠಡಿ, ಮೂಲ ಸೌಲಭ್ಯಗಳ ಕೊರತೆ ನೋಡಿ ವಾಪಸ್ ಹೋಗುತ್ತಿದ್ದಾರೆ. ಈ ಕಾರಣದಿಂದಾಗಿ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಒಟ್ಟಾರೆ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿರುವ ಕಟ್ಟಡವನ್ನು ಇಟ್ಟುಕೊಂಡು ಕೊಟ್ಟೂರೇಶ್ವರ ಕಾಲೇಜ್ ಆಡಳಿತ ಮಂಡಳಿ ಯಾವ ಘನಕಾರ್ಯ ಸಾಧಿಸಲು ಹೊರಟಿದ್ಯೋ ಗೊತ್ತಿಲ್ಲ ಸದ್ಯ ಈ ಕಟ್ಟಡ ಬೀಳುವುದಂತು ಗ್ಯಾರಂಟಿ. ಆದರೆ ಕಾಲೇಜು ವಿದ್ಯಾರ್ಥಿಗಳು ಅಲ್ಲಿಯೇ ಓಡಾಟ ನಡೆಸುತ್ತಿರುವುದರಿಂದ ಅನಾಹುತ ನಡೆದಾಗ ಎಚ್ಚೆತ್ತುಕೊಳ್ಳುವ ಬದಲು ಈಗಲೇ ಅಲರ್ಟ್ ಆಗುವುದು ಒಳ್ಳೆಯದು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here