ಕೊಟ್ಟೂರು:ಸೆ:08:- ತಾಲೂಕಿನ ಅಂಬಳಿ ಗ್ರಾಮದಲ್ಲಿ ಶ್ರೀ ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಗವಾಯಿರವರ 12ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮಂಗಳವಾರ ನಡೆಸಲಾಯಿತು.
ಈ ಕಾರ್ಯಕ್ರಮವು ಅಂಬಳಿ ಗ್ರಾಮದ ಸರ್ಕಾರಿ ಹಿ. ಪ್ರಾಥಮಿಕ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು ಶ್ರೀ ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಗವಾಯಿ ಸೇವಾ ಟ್ರಸ್ಟ್ (ರಿ) ಅಂಬಳಿ ಅಧ್ಯಕ್ಷರಾದ ಎಂ. ನಾಗಪ್ಪ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದರು ಪುಟ್ಟರಾಜ ಗವಾಯಿಗಳು ಈ ಸಮಾಜಕ್ಕೆ ಮತ್ತು ಎಷ್ಟೊ ಅಂದರ ಮಕ್ಕಳ ಬಾಳಿನಲ್ಲಿ ದಾರಿ ದೀಪವಾಗಿ ಸೇವೆ ನೀಡಿದ್ದಾರೆ ಪುಟ್ಟರಾಜ ಗವಾಯಿಗಳ ಈ ಸೇವೆಯು ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾಗಿ ಇರುತ್ತದೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಸೇವಾ ಟ್ರಸ್ಟ್ ರಿ ಸಂಘದ ಅಧ್ಯಕ್ಷರಾದ ಎಂ ನಾಗಪ್ಪ, ಗೌರವ ಅಧ್ಯಕ್ಷರಾದ ಹೇಮಂತಾರೆಡ್ಡಿ, ಉಪಧ್ಯಕ್ಷರಾದ ಟಿ. ಬಸವರಾಜ್, ಖಜಾಂಸಿ ಬೀ. ಲೋಕೇಶ್, ಕಾರ್ಯದರ್ಶಿ ಕಾಳಿ ಚಾರಿ, ಹಾಗೂ ಟ್ರಸ್ಟಿನ ಎಲ್ಲಾ ಸದಸ್ಯರು ಮತ್ತು ವಿದ್ಯಾರ್ಥಿಗಳು ಇದ್ದರು
ವರದಿ: ಶಿವರಾಜ್ ಕನ್ನಡಿಗ