ಯುವ ಮಂಡಳಿ ಅಭಿವೃದ್ದಿ ಕಾರ್ಯಕ್ರಮ

0
82

ಶಿವಮೊಗ್ಗ ಸೆಪ್ಟೆಂಬರ್ 13 :ನೆಹರು ಯುವ ಕೇಂದ್ರ ಶಿವಮೊಗ್ಗ ಹಾಗೂ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1, 2 ಮತ್ತು 3 ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಯುವ ಮಂಡಳಿ ಅಭಿವೃದ್ದಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮನ್ವಯ ಕಾಶಿ ಪಾಲ್ಗೊಂಡು ಮಾತನಾಡಿ, ಯುವ ಮಂಡಳಿಗಳ ಮಹತ್ವ ತಿಳಿಸಿ, ದೇಶ ಸೇವೆಯಲ್ಲಿ ಯುವ ಜನರು ಭಾಗವಹಿಸಬೇಕು ಎಂದು ಕರೆ ನೀಡಿದರು.

ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಸುರೇಶ್ ಹೆಚ್.ಎಂ ಮಾತನಾಡಿ, ಯುವ ಸಂಘಗಳು ಮತ್ತು ಮಂಡಳಿಗಳು ನೆಹರು ಯುವ ಕೇಂದ್ರದ ಜೊತೆ ಸೇರಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಜೊತೆ ಸಂಪರ್ಕ ಇಟ್ಟುಕೊಂಡು ಸಮಾಜ ಸೇವೆ ಮಾಡುತ್ತಿರುವಂತಹ ಯುವ ಮಂಡಳಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ನೆಹರು ಯುವ ಕೇಂದ್ರದ ಯುವ ಅಧಿಕಾರಿಗಳಾದ ಉಲ್ಲಾಸ್ ಕೆ. ಟಿ.ಕೆ, ರಾ.ಸೇ.ಯೋ. ಕಾರ್ಯಕ್ರಮ ಅಧಿಕಾರಿಗಳಾದ ನಾಗರಾಜ್ ಕೆ.ಎಂ. ಮತ್ತು ವಿವಿಧ ಸಂಘಗಳ ಸದಸ್ಯರು. ರಾ.ಸೇ.ಯೋ. ಮತ್ತು ನೆಹರು ಯುವ ಕೇಂದ್ರದ ಸ್ವಯಂ ಸೇವಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here