ಕೊಟ್ಟೂರು: ನಾಳೆ ನಡೆಯುವ ನಾಡಹಬ್ಬ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪಟ್ಟಣದ ಅಂಗಡಿ ಮುಂಗಟ್ಟಿನ ವ್ಯಾಪಾರಸ್ಥರು ತಪ್ಪದೇ ಕಡ್ಡಾಯವಾಗಿ ಕನ್ನಡ ಬಾವುಟ ಆರಿಸುವಂತೆ ಕೊಟ್ಟೂರು ತಾಲೂಕು ಕರವೇ ( ನಾರಾಯಣಗೌಡ್ರ ಬಣ) ದ ತಾಲೂಕು ಅಧ್ಯಕ್ಷರಾದ ಶ್ರೀನಿವಾಸ್ ತಿಳಿಸಿದ್ದಾರೆ ನಾಡಹಬ್ಬ ವಿಜೃಂಭಿಸಲು ನಾಳೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರತಿಯೊಬ್ಬ ವ್ಯಾಪಾರಸ್ಥರು ತಪ್ಪದೇ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಅಂಗಡಿಗಳತ್ತ ಕರವೇ ತಾಲೂಕು ಅಧ್ಯಕ್ಷರು, ಮಾಧ್ಯಮ ಸೆಲೆಗಾರರು ಶಿವರಾಜ್ ಕನ್ನಡಿಗ ಹಾಗೂ ಸದಸ್ಯರುಗಳು ಸಹ ಹೋಗಿ ಕನ್ನಡ ಬಾವುಟ ವಿತರಿಸಿದರು ಕಡ್ಡಾಯವಾಗಿ ಹಾರಿಸುವಂತೆ ತಿಳಿಸಿದ್ದಾರೆ.